ಬೆಂಕಿಗೆ ಆಹುತಿಯಾದ ಬೈಕ್ ಗಳು: ಮೂವರ ದುರ್ಮರಣ

ವಿಜಯಪುರ: ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತುಕೊಂಡ ಪರಿಣಾಮ ಮೂವರು ಮೃತಪಟ್ಟು, ಓರ್ವ ತೀವ್ರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ–ಹೂವಿನ ಹಿಪ್ಪರಗಿ ರಸ್ತೆಯಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಅಫಜಲಪುರ ತಾಲ್ಲೂಕಿನ ಬಳರೂಗಿ ಗ್ರಾಮದ ಕುಮಾರ ಬಲಕುಂದಿ, ಜಯವಾಡಗಿ ನಿವಾಸಿ ಬಸವರಾಜ ಹಂದ್ರಾಳ(20) ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಜಯವಾಡಗಿಯ ಸಾಹೇಬಗೌಡ ಸಿದ್ದಾಪುರದ(20) ಬಸವನ ಬಾಗೇವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.