ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಬೈಕ್ ರ‍್ಯಾಲಿ

ಉಡುಪಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ನಡೆಯುವ ಬೈಕ್ ರ‍್ಯಾಲಿಗೆ ಬ್ಲಾಗರ್ಸ್ ಮೀಟ್- ಪ್ರವಾಸೋದ್ಯಮ ಪುನರಾವಲೋಕನ ಎಂಬ ಸಂದೇಶದೊಂದಿಗೆ ಸೆಪ್ಟಂಬರ್ 27 ರಂದು ಬೆಳಗ್ಗೆ 10.30 ಕ್ಕೆ ಮಣಿಪಾಲದ ಜಿಲ್ಲಾಡಳಿತದ ಸಂಕೀರ್ಣದಲ್ಲಿ ಶಾಸಕ ಕೆ. ರಘುಪತಿ ಭಟ್ ಚಾಲನೆ ನೀಡಲಿದ್ದಾರೆ.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಹಾಗೂ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಬೈಕ್ ರ‍್ಯಾಲಿಯು ಮಣಿಪಾಲದ ಜಿಲ್ಲಾಡಳಿತದ ಸಂಕೀರ್ಣದಿಂದ ಹೊರಟು ಸಿಂಡಿಕೇಟ್ ವೃತ್ತ-  ಬಬ್ಬುಸ್ವಾಮಿ ದೇವಸ್ಥಾನ ಯು ಟರ್ನ್- ಟೈಗರ್ ಸರ್ಕಲ್- ಕಲ್ಸಂಕ- ಅಮ್ಮುಂಜೆ ಪೆಟ್ರೋಲ್ ಬಂಕ್-ತನಿಷ್ಕ ಜ್ಯುವೆಲರಿ ಎಡಭಾಗ- ಸಂಸ್ಕೃತ ಕಾಲೇಜು-ಕಲ್ಪನ ಥಿಯೇಟರ್- ಜೋಡುಕಟ್ಟೆ ಯೂ ಟರ್ನ್-ಕೆ.ಎಂ ಮಾರ್ಗ- ಶಿರಿಬೀಡು ಎಡಭಾಗ- ಕರಾವಳಿ ಬೈಪಾಸ್ ರಸ್ತೆ ಮೂಲಕ ಮಲ್ಪೆ ಬೀಚ್ ಗಾಂಧಿ ಪ್ರತಿಮೆ ಬಳಿ ಸಮಾರೋಪಗೊಳ್ಳಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.