ಕಾರ್ಕಳ: ಪರ್ಪಲೆಗಿರಿಯಲ್ಲಿ ದೈವಸ್ಥಾನ ನಿರ್ಮಾಣಕ್ಕಾಗಿ ಭೂ ನಿಧಿ ಸಂಚಯನಕ್ಕೆ ಚಾಲನೆ

ಕಾರ್ಕಳ: ಇಲ್ಲಿನ ಅತ್ತೂರು ಪರ್ಪಲೆಗಿರಿಯಲ್ಲಿ ಶುಕ್ರವಾರದಂದು ಭೂ ನಿಧಿ ಸಂಚಯನದ ಅಂಗವಾಗಿ ಕೇಂಜ ಶ್ರೀಧರ ತಂತ್ರಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು.

ಪರ್ಪಲೆಗಿರಿಯಲ್ಲಿ ದೈವಸ್ಥಾನ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲಿಯೇ ಚಾಲನೆ ದೊರೆಯಲಿದ್ದು, ದೇವಸ್ಥಾನ ಮತ್ತು ದೈವಸ್ಥಾನ ನಿರ್ಮಾಣ ಹಾಗೂ ಇತರ ಧಾರ್ಮಿಕ ಸಾಮಾಜಿಕ ಕಾರ್ಯಗಳಿಗಾಗಿ ಜಮೀನಿನ ಅವಶ್ಯಕತೆ ಇರುವುದರಿಂದ ಭೂ ನಿಧಿ ಸಂಚಯನ ಯೋಜನೆಯನ್ನು ಹಮ್ಮಿಕೊಂಡಿದ್ದು ( 0.25 ಸೆಂಟ್ಸ್(3,000/-), 0.50 ಸೆಂಟ್ಸ್(6,000/-),1 ಸೆಂಟ್ಸ್(12,000/-) 2 ಸೆಂಟ್ಸ್(24,000/-), 5 ಸೆಂಟ್ಸ್(60,000/-),10 ಸೆಂಟ್ಸ್(1,20,000/-), 25 ಸೆಂಟ್ಸ್ (3 ಲಕ್ಷ), ಅರ್ಧ ಎಕರೆ(6 ಲಕ್ಷ), ಒಂದು ಎಕರೆ(12 ಲಕ್ಷ) ಭೂ ಸಂಚಯನ ಮಾಡಲಾಗಿದೆ.

ಬುಧವಾರದಂದು ಭೂನಿಧಿ ಸಂಚಯನ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಈ ಪುಣ್ಯ ಕಾರ್ಯದಲ್ಲಿ ಭಗವತ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪುನರುತ್ಥಾನ ಸಮಿತಿ ಹಾಗೂ ಟ್ರಸ್ಟ್ ತಿಳಿಸಿದೆ.

ಸಾಂಕೇತಿಕ ಭೂದಾನ ಕಾರ್ಯಕ್ರಮದಲ್ಲಿ ವಿನೋದ್ ಕಾಮತ್ ಮುಲ್ಕಿ, ರವೀಂದ್ರ ಶೆಟ್ಟಿ ಬಜಗೋಳಿ, ನಿತ್ಯಾನಂದ ಪೈ ಕಾರ್ಕಳ, ಬೋಳ ಪ್ರಶಾಂತ್ ಕಾಮತ್, ವಿಠಲ್ ಶೆಟ್ಟಿ ಬಲಿಪಗುತ್ತು, ವಿ.ಸುನಿಲ್ ಕುಮಾರ್, ಉದಯಕುಮಾರ್ ಶೆಟ್ಟಿ ಮುನಿಯಾಲು, ಸತ್ಯೇಂದ್ರ ಭಟ್ ಹಾಗೂ ಅರುಣ್ ಸೇನ್, ಎಂ.ಕೆ.ವಿಜಯ್ ಕುಮಾರ್, ಚೇತನ್ ಕೋಟ್ಯಾನ್, ಯೋಗೀಶ್ ಹೆಗ್ಡೆ ಅತ್ತೂರು, ಮನ್ಮಥ ಶೆಟ್ಟಿ ಅತ್ತೂರು, ಲಕ್ಷ್ಮಣ್ ಕುಡ್ವ, ಶ್ರೀಧರ ಸುವರ್ಣ, ಬಾಲಕೃಷ್ಣ ಹೆಗ್ಡೆ ಬಾಲಾಜಿ ಶಿಬಿರ, ನಂದಕುಮಾರ್ ಹೆಗ್ಡೆ, ದೇವೇಂದ್ರ ಹೆಗ್ಡೆ, ವಿನಯ್ ಹೆಗ್ಡೆ ಕಾಬೆಟ್ಟು, ಸಚ್ಚಿಂದ್ರ ಹೆಗ್ಡೆ ಅತ್ತೂರು, ಸುಂದರ ಹೆಗ್ಡೆ, ನವೀನ್ ನಾಯಕ್ ನಿಟ್ಟೆ ಹಾಗೂ ಇತರರು ಭೂದಾನದ ಘೋಷಣೆಯನ್ನು ಮಾಡಿದ್ದು ಇವರಿಗೆ ಕ್ಷೇತ್ರದಲ್ಲಿ ಗೌರವ ಪೂರ್ವಕವಾಗಿ ಶಾಲುಹೊದಿಸಿ ಫಲ ಪ್ರಸಾದವನ್ನು ನೀಡಲಾಯಿತು.

ಟ್ರಸ್ಟ್ ಹಾಗೂ ಪುನರುತ್ಥಾನ ಸಮಿತಿಯ ಸದಸ್ಯರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9980067033/ 9663559251