ತೆಂಕಪೇಟೆ: ಕಾಶೀಮಠಾಧೀಶರಿಂದ ಭಜನಾ ಸಪ್ತಾಹ ಪೌಳಿ ರಜತ ಅಲಂಕಾರಿಕ ಮಂಟಪ ಸಮರ್ಪಣೆ

ತೆಂಕಪೇಟೆ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಶನಿವಾರದಂದು ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ, ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ನೂತನ ಸುವರ್ಣ ಖಚಿತ ಶ್ರೀಲಕ್ಷ್ಮೀಹಾರ ಸಮರ್ಪಣೆ ಮಾಡಿದರು. ಶ್ರೀ ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.

ಭಜನಾ ಸಪ್ತಾಹ ಪೌಳಿಯಲ್ಲಿ ನೂತನವಾಗಿ ನಿರ್ಮಿಸಿದ ರಜತ ಅಲಂಕಾರಿಕ ಮಂಟಪವನ್ನು ಪೂಜ್ಯ ಶ್ರೀಗಳ ಆರತಿ ಬೆಳಗಿಸಿ ಉದ್ಘಾಟಿಸಿದರು. ಧಾರ್ಮಿಕ ಪೂಜಾವಿಧಾನಗನ್ನು ಚೇಂಪಿ ಶ್ರೀಕಾಂತ್ ಭಟ್ ನೆರವೇರಿಸಿದರು. ದೇವಳದ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ, ವಸಂತ ಕಿಣಿ, ವಿಶ್ವನಾಥ ಭಟ್, ಪ್ರಕಾಶ್ ಶೆಣೈ, ದೇವದಾಸ್ ಪೈ, ಅಶೋಕ ಬಾಳಿಗಾ, ಗಣೇಶ ಕಿಣಿ, ರೋಹಿತಾಕ್ಷ ಪಡಿಯಾರ್, ಪುಂಡಲೀಕ್ ಕಾಮತ್, ಪ್ರಕಾಶ್ ಭಕ್ತ, ಉಮೇಶ್ ಪೈ, ನಾರಾಯಣ ಪ್ರಭು, ಅರ್ಚಕರಾದ ವಿನಾಯಕ ಭಟ್, ದಯಾಘನ್ ಭಟ್, ದೀಪಕ್ ಭಟ್, ರವೀಂದ್ರ ಭಟ್, ಭಜನಾ ಸಪ್ತಾಹ ಸಮಿತಿಯ ಸದಸ್ಯರು, ಜಿ.ಎಸ್.ಬಿ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.