ಕನ್ನರ್ಪಾಡಿ: ಶ್ರೀಮದ್ ಭಾಗವತ ಕಥಾಮೃತ ಸಪ್ತಾಹ ಆರಂಭ

ಕನ್ನರ್ಪಾಡಿ: ಶ್ರೀ ಜಯ ದುರ್ಗಾ ಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ, ಬ್ರಾಹ್ಮಣ ಸಭಾ ಉಡುಪಿ ಆಶ್ರಯದಲ್ಲಿ ಕುತ್ಪಾಡಿ ಬೈಲೂರು ದಿವಂಗತ ರಾಮಚಂದ್ರ ಭಟ್ ಮಕ್ಕಳ ಸಹಕಾರದೊಂದಿಗೆ ಶ್ರೀಮದ್ ಭಾಗವತ ಕಥಾಮೃತ ಸಪ್ತಾಹ – ಪ್ರವಚನಕಾರದ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಇವರಿಂದ ಸಂಜೆ 5.15 ರಿಂದ 7.30 ವರೆಗೆ ನಡೆಯುತ್ತಿದ್ದು, ದೇವಳದ ಅಧ್ಯಕ್ಷ ರಾಘವೇಂದ್ರ ಭಟ್ , ಮುರಳೀಧರ್ ಭಟ್, ಬ್ರಾಹ್ಮಣ ಸಭಾದ ಅಧ್ಯಕ್ಷ ರಾಜೇಂದ್ರ ಭಟ್ ಹಾಗೂ ನೂರಾರು ಭಕ್ತರೂ ಉಪಸ್ಥಿತರಿದ್ದರು.