ಉಡುಪಿ: ಬೆಸ್ಟ್ ಅಕಾಡೆಮಿ ಉದ್ಘಾಟನೆ

ಉಡುಪಿ: ಯುವಜನರು ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬೇಕು ಎಂದು ಉಡುಪಿ ರಾಮಭವನ ಹೋಟೆಲ್ ನ ಮಾಲಕ ವಿಶ್ವನಾಥ್ ಶೆಣೈ ಹೇಳಿದರು. ಬೆಸ್ಟ್ ಅಕಾಡೆಮಿಯು ಗುಣಮಟ್ಟದ ಶಿಕ್ಷಣದ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದ್ದು ಸಂಸ್ಥೆ ಇನ್ನಷ್ಟು ಪ್ರಗತಿ ಕಾಣಲಿ ಎಂದು ಶುಭ ಹಾರೈಸಿ, ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು.

ಉಡುಪಿಯ ಅಲಂಕಾರ್ ಟಾಕೀಸ್ ಬಳಿ ಲಂಡನ್ ಆಪ್ಟಿಕಲ್ಸ್ ಮಹಡಿಯಲ್ಲಿರುವ ಸಂಸ್ಥೆಯು ಈಗಾಗಲೇ ಕಂಪ್ಯೂಟರ್ ತರಬೇತಿಯನ್ನು ನೀಡುತ್ತಿದ್ದು ಇದರ ಜೊತೆಗೆ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಹಾಗೂ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ, ಬ್ಯಾಂಕಿಂಗ್ ಐ.ಬಿ.ಪಿ.ಎಸ್ ತರಬೇತಿಯನ್ನು ನೀಡುತ್ತಿದೆ ಎಂದು ರಫೀಕ್ ಖಾನ್ ಹೇಳಿದರು.

ಸಂತೋಷ್ ವಂದಿಸಿದರು.

ಸಂಸ್ಥೆಯ ತರಬೇತುಗಾರ್ತಿ ಶ್ರೀಲತಾ, ವಿದಾರ್ಥಿಗಳು ಮತ್ತು ಅವರ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.