ಬೆಂಗಳೂರು:ಬಹುಮುಖ ಪ್ರತಿಭೆ ಆಶಾ ನಾಯಕ್ ಇವರಿಗೆ ಕರುನಾಡ ರತ್ನ ರಾಜ್ಯ ಪ್ರಶಸ್ತಿ

ಬೆಂಗಳೂರು-ಶ್ರೀ ಸರ್ವೇಜನಾಃ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ (ರಿ) ನಾಗರಬಾವಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ “ಕನ್ನಡ ನಾಡು ಹಬ್ಬ” ನಾಡಿಗಾಗಿ ಗಣನೀಯ ಸೇವೆ ಸಲ್ಲಿಸಿದ ಬಹುಮುಖ ಪ್ರತಿಭೆ ಆಶಾ ನಾಯಕ್ ಇನ್ನಂಜೆ ಇವರಿಗೆ ಕರುನಾಡ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಯಕ್ಷಗಾನ ಬಳಗ ಬಂಟಕಲ್ಲು ಸ್ಥಾಪಕಾಧ್ಯಕ್ಷರಾಗಿ,ಶ್ರೀ ದುರ್ಗಾ ಮಹಿಳಾ ಚಂಡೆ ಬಳಗದ ಕಾರ್ಯದರ್ಶಿಯಾಗಿ,ಸಮಾಜ ಸೇವಕಿಯಾಗಿ,ಸ್ಪೋರ್ಟ್ಸ್ ಕನ್ನಡ ತಂಡದ ಸದಸ್ಯೆಯಾಗಿ,ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತೆಯಾದ ಇವರು ಬಹಳಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.