ಬೆಳ್ಳಂಪಳ್ಳಿ: ಕಲಾರ್ಥ್ಯ ಉತ್ಸವ, ಮೋಹನಾಭಿನಂದನ2026


ಬ್ರಹ್ಮಾವರ: ಬೆಳ್ಳಂಪಳ್ಳಿ ನರಸಿಂಹ ಪ್ರತಿಷ್ಠಾನದ
ಕಲಾರ್ಘ ಉತ್ಸವ ನೆರವೇರಿತು. ಕಲಾರ್ಥ್ಯ ಭರತನಾಟ್ಯ ತರಗತಿಯ ಸುಮಾರು 50 ಮಕ್ಕಳಿಂದ ಒಂದು ಗಂಟೆಯ ಕಾರ್ಯಕ್ರಮ ಜರಗಿತು.
ಈ ಸಂದರ್ಭ ನರಸಿಂಹ ಪ್ರತಿಷ್ಠಾನ ನೀಡುವ ಕಲಾರ್ಘ ಪ್ರಶಸ್ತಿಯನ್ನು ಭಾರತದ ಸಾಂಸ್ಕೃತಿಕ ರಾಯಭಾರಿ, ಆಳ್ವಾಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ| ಎಂ. ಮೋಹನ ಆಳ್ವ ಅವರಿಗೆ ಮೋಹನಾಭಿನಂದನ ಮೂಲಕ ಪ್ರದಾನಿಸಲಾಯಿತು.
ಕಾವ್ಯ, ನೃತ್ಯ, ವೇಣು, ಗಾನ, ಚಿತ್ರ, ಪ್ರತಿಮಾ, ತರ್ಕ(ರೂಬಿಕ್ಸ್ ಕ್ಯೂಬ್), ಧಾರ್ಮಿಕ, ರಕ್ಷಾ, ಅಕ್ಕರ, ವಚನ, ವೇದ, ಫಲ, ಪುಷ್ಪ ಬಿರುದು ಪ್ರದಾನ, ಕಲಾರ್ಘ ಪ್ರಶಸ್ತಿ ಎಂಬ 16 ಬಗೆಯ ಸಮ್ಮಾನದೊಂದಿಗೆ ಕಾರ್ಯಕ್ರಮ ನೆರವೇರಿತು.
ಡಾ| ಆಳ್ವ ಅವರಿಗೆ ಆಳ್ವಾಸ್ ಹಳೆ ವಿದ್ಯಾರ್ಥಿಗಳು ಭಾರತ ಕಲಾ ಭೂಷಣ ಎಂಬ ವಿಶೇಷ ಬಿರುದು ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ। ಮೋಹನ್ ಆಳ್ವಾ ಅವರು, ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕವಲ್ಲ, ಸುಸಂಸ್ಕೃತ ಸಮಾಜವನ್ನು ಕಟ್ಟಿ ಕೊಡುವುದು. ಆಳ್ವಾಸ್ ಕ್ಯಾಂಪಸ್ ನಲ್ಲಿ ಓಡಾಡುತ್ತಿದ್ದ ಮಕ್ಕಳು ಇಂದು ಜಗತ್ತಿನೆಲ್ಲೆಡೆ ಹೆಸರು
ಗಳಿಸುತ್ತಿದ್ದು, ಸಮಾಜಕ್ಕೆ ಸುಸಂಸ್ಕೃತ ಮಕ್ಕಳನ್ನು ಕೊಟ್ಟ ಹೆಮ್ಮೆ ಇದೆ ಎಂದರು.
ಮಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಜಯಕರ ಶೆಟ್ಟಿ ಇಂದ್ರಾಳಿ, ಡಿ. ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಪೂರ್ಣಿಮಾ, ರಾಜೀವ್ ಆಳ್ವ, ಬಿ. ಅಶೋಕ್‌ ಕುಮಾರ್‌ಶೆಟ್ಟಿ ಪುರಂದರ ಕೋಟ್ಯಾನ್, ಸರಸ್ವತಿ ಎನ್ . ಪ್ರಭು, ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.
ಮಹಮ್ಮದ್ ಅಶ್ವಕ್ ಹುಸ್ಸೇನ್ ವರದಿ ವಾಚಿಸಿದರು. ಧನಂಜಯ ಕುಂಬ್ಳೆ ಅಭಿನಂದನಾ ಭಾಷಣ ಮಾಡಿದರು. ದೀವಿತ್ ಕೆ. ಎಸ್. ಪೆರಾಡಿ ನಿರೂಪಿಸಿ, ನರಸಿಂಹ ಪ್ರತಿಷ್ಠಾನದ ಸಂಸ್ಥಾಪಕ ಕಾರ್ತಿಕ್ ಪ್ರಭು ವಂದಿಸಿದರು.
ಈ ಕಾರ್ಯಕ್ರಮದ ಅನಂತರ ಆಳ್ವಾಸ್ ಭರತನಾಟ್ಯದ ಹಳೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಕಲಾರ್ಘ ಯಕ್ಷಗಾನ ತರಗತಿಯ ಮಕ್ಕಳಿಂದ ಸುದರ್ಶನ ಗರ್ವಭಂಗ ಯಕ್ಷಗಾನ ಹಾಗೂ ಆಳ್ವಾಸ್ ಧೀಂಕಿಟ ಯಕ್ಷಗಾನ ಕೇಂದ್ರದ ಹಳೆಯ ವಿದ್ಯಾರ್ಥಿಗಳಿಂದ ದೇವೀ ಮಹಾತ್ಮ ಯಕ್ಷಗಾನ ಬಯಲಾಟ ನಡೆಯಿತು.