ಉದ್ಯಮಿ ಕೆ. ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು 5 ಸಾಕ್ಷಿಗಳ ಹೇಳಿಕೆ

ಉಡುಪಿ: ಉದ್ಯಮಿ ಕೆ. ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು 5 ಸಾಕ್ಷಿಗಳ ಹೇಳಿಕೆ ಹಾಗೂ ವಿಚಾರಣೆ ನಡೆಯಿತು.
ಸೋಮವಾರ 10 ಸಾಕ್ಷಿಗಳ ಹೇಳಿಕೆ ಪಡೆಯುವ ಬಗ್ಗೆ ಸಮನ್ಸ್ ನೀಡಿಲಾಗಿತ್ತು. ಆದರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ್ ಎಂ.ಜೋಶಿ ಸಮ್ಮುಖದಲ್ಲಿ 5 ಮಂದಿ ಹೇಳಿಕೆ ಮಾತ್ರವೇ ಪಡೆಯಲಾಯಿತು. ಮಂಗಳವಾರವೂ ಉಳಿದ ಸಾಕ್ಷಿಗಳ ವಿಚಾರಣೆ ನಡೆಯಲಿದೆ.
ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ವಿವಿಜ್ಞಾನ ವಿಭಾಗದ ಪ್ರೊ. ಉದಯ ಕುಮಾರ್, ಮೋಟಾರ್ ವಾಹನ ನಿರೀಕ್ಷಕ ಮಾರುತಿ ನಾಯಕ್, ಭಾಸ್ಕರ್ ಶೆಟ್ಟಿ ಸಹೋದರಿ  ಜಯಂತಿ, ಕುಂದಾಪುರ ಉಪ ತಹಶೀಲ್ದಾರ್ ಎಸ್.ವಿ.ವಿನಯ್, ವಿ ವಿಜ್ಞಾನದ ಗೀತಾಲಕ್ಷ್ಮೀ ಅವರಿಂದ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಎಂ. ಶಾಂತರಾಮ್ ಶೆಟ್ಟಿ ಹೇಳಿಕೆ ಪಡೆದುಕೊಂಡರು.
ಈ ಸಂದರ್ಭ ಆರೋಪಿ ಪರ ವಕೀಲರಾದ ಅರುಣ್ ಬಂಗೇರ, ನಾರಾಯಣ ಪೂಜಾರಿ ತೋನ್ಸೆ, ವಿಕ್ರಂ ಹೆಗ್ಡೆ ಸಾಕ್ಷಿಗಳನ್ನು ಅಡ್ಡ ವಿಚಾರಣೆಗೆ ಒಳಪಡಿಸಿದ್ದರು. ಜಾಮೀನು ಮೇಲೆ ಬಿಡುಗಡೆಗೊಂಡಿರುವ ರಾಜೇಶ್ವರಿ ಶೆಟ್ಟಿ ಹಾಜರಿದ್ದರು. ಮಗ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಂದಳಿಕೆ ನಿರಂಜನ್ ಭಟ್ ಅವರನ್ನು ವಿಡಿಯೋ ಕಾನರೆನ್ಸ್ ಮೂಲಕ ವಿಚಾರಣೆ ಮಾಡಲಾಯಿತು.