ರೈಲಿಗೆ ಹೆದರಿ ಓಡಿದ ಕಾಡುಕೋಣ, ಮರದ ನಡುವೆ ಸಿಲುಕಿ ಸಾವು

ಬಂಟ್ವಾಳ: ಕಾಡು ಕೋಣವೊಂದು ರೈಲು ಬರುವ ವೇಳೆ ಓಡಿ ಹೋಗಿ ಮರದ ನಡುವೆ ಸಿಲುಕಿ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸಾಗು ಗಂಗೆಪಾಲು ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಸುಮಾರು 4 ವರ್ಷ ಪ್ರಾಯದ ಗಂಡು ಕಾಡುಕೋಣ ರೈಲು ಹಳಿಯನ್ನು ದಾಟುವ ವೇಳೆ ರೈಲಿನ ಶಬ್ದಕ್ಕೆ ಓಡಿ ಹೋಗಿ ಮರಕ್ಕೆ ಬಡಿದಿದೆ. ಈ ವೇಳೆ ಕತ್ತು ಹಾಗೂ ಕೊಂಬು ತುಂಡಾಗಿ ಸತ್ತಿದೆ ಎಂದು ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ.

ಸಂಜೆಯ ವೇಳೆ ಸ್ಥಳೀಯರು ಗುಡ್ಡೆಗೆ ಸೊಪ್ಪು ತರಲು ಹೋಗುವ ವೇಳೆ ಬೆಳಕಿಗೆ ಬಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳಾದ ಜಿತೇಶ್, ಯಶೋಧರ ದಯಾನಂದ, ಕ್ಯಾತಲಿಂಗ, ಪ್ರವೀಣ್ ಮತ್ತು ಯೋಗೀಶ್ ವಾಹನ ಚಾಲಕ ಜಯರಾಮ್ ಬೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ವೈದ್ಯಾಧಿಕಾರಿ ಸ್ಥಳಕ್ಕೆ ಬೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕಾಡುಕೋಣದ ಮೃತದೇಹವನ್ನು ಬೆಂಕಿಯಲ್ಲಿ ಸುಟ್ಟು ಬಳಿಕ ಮಣ್ಣಿನಲ್ಲಿ ಹೂಳಲಾಯಿತು.