ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಸಂಶೋಧನಾ ಅನುದಾನಾವಕಾಶಗಳು ಮತ್ತು ಸಾಧ್ಯತೆಗಳು” ಎಂಬ ವಿಷಯದ ಕುರಿತು ಉಪನ್ಯಾಸ

ಬಂಟಕಲ್,ಉಡುಪಿ:29 ಮೇ 2025 ಶ್ರಿ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಘಟಕವು ಐಎಸ್‌ಟಿಇ ಅಧ್ಯಾಪಕ ಘಟಕದ ಸಹಯೋಗದೊಂದಿಗೆ ದಿನಾಂಕ 27 ಮೇ 2025 ರಂದು ಸಂಶೋಧನಾ ಅನುದಾನಾವಕಾಶಗಳು ಮತ್ತು ಸಾಧ್ಯತೆಗಳು ಎಂಬ ವಿಷಯದ ಕುರಿತು ಉಪನ್ಯಾಸವನ್ನು ಆಯೋಜಿಸಿತ್ತು.

ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ತಾಂತ್ರಿಕ ವಿದ್ಯಾಲಯ ಇಲ್ಲಿನ ಘಟಕದ ಸಹನಿರ್ದೇಶಕರಾದ ಡಾ. ಅಶೋಕ್ ರಾವ್ ಭಾಗವಹಿಸಿದ್ದರು. ಇವರು ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆಯ ಮಹತ್ವ ಮತ್ತು ಶಿಕ್ಷಕರು ಎದುರಿಸುವ ವಿವಿಧ ಸವಾಲುಗಳ ಬಗ್ಗೆ
ವಿವರಿಸಿದರು. ಬೋಧನೆಯ ಜವಾಬ್ದಾರಿಗಳು ಮತ್ತು
ಸಂಶೋಧನಾ ಚಟುವಟಿಕೆಗಳ ನಡುವಿನ ಸಮತೋಲನವನ್ನು
ಕಾಯ್ದುಕೊಳ್ಳುವ ಅಗತ್ಯತೆಯನ್ನು ತಿಳಿಸಿದರು.

ಪ್ರತಿಯೊಬ್ಬ ಉಪನ್ಯಾಸಕರು ಸಂಶೋಧನೆಯತ್ತ ಹೆಚ್ಚು
ಗಮನ ಹರಿಸಬೇಕು ಹಾಗೂ ಪಿಎಚ್‌ಡಿ ಪದವಿ
ಪಡೆದುಕೊಳ್ಳುವುದು ಸಂಶೋಧನಾ ಜೀವನದ ಪ್ರಾರಂಭ
ಮಾತ್ರ ಎಂದರು. ಸಂಶೋಧನೆಗೆ ಬೆಂಬಲ ನೀಡುವ ಹಲವಾರು
ಸರ್ಕಾರಿ ಮತ್ತು ಖಾಸಗಿ ಅನುದಾನ ಸಂಸ್ಥೆಗಳ ಬಗ್ಗೆ ಮಾಹಿತಿ
ನೀಡಿದರು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ
ಕಾರ್ಯನಿರ್ವಾಹಣ ಅಧಿಕಾರಿಗಳಾದ ಡಾ. ರಾಧಕೃಷ್ಣ ಐತಾಳ್,
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್,
ಡೀನ್‌ಗಳು ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಮತ್ತು
ಪ್ರಾಧ್ಯಾಪಕರು ಉಪಸ್ಥಿತರಿದ್ದರು.