ಬಂಟಕಲ್: ಶ್ರೀ ಮಧ್ವವಾದಿರಾಜ ವಿದ್ಯಾರ್ಥಿವೇತನ ಯೋಜನೆ: ಅರ್ಜಿ ಆಹ್ವಾನ

ಉಡುಪಿ:ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಯೋಜನೆಯಾಗಿ 2025-26ನೇ ಶೈಕ್ಷಣಿಕ ವರ್ಷಕ್ಕೆ ‘ಶ್ರೀ ಮಧ್ವವಾದಿರಾಜ ಎಂಬಿಎ ವಿದ್ಯಾರ್ಥಿ ವೇತನ’ ಎಂಬ ಹೊಸ ವಿದ್ಯಾರ್ಥಿವೇತನ ಆರಂಭಿಸಿದೆ.

ಆಯ್ಕೆಯು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನಡೆಸಲಾಗುತ್ತದೆ. ವಿದ್ಯಾರ್ಥಿ 10ನೇ ತರಗತಿಯಿಂದ ಪದವಿ ತರಗತಿಯ ಅಂತಿಮ ಸೆಮಿಸ್ಟರ್ ವರೆಗೆ ಶೇ.75ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ವಾಣಿಜ್ಯ, ವ್ಯವಹಾರ ಆಡಳಿತ, ವಿಜ್ಞಾನ, ಎಂಜಿನಿಯರಿಂಗ್, ಕಲೆ ಮುಂತಾದ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಈ ವಿದ್ಯಾರ್ಥಿವೇತನವು ಎಸ್ ಎಂವಿಐಟಿಎಂನಲ್ಲಿ ಎಂಬಿಎ ಪ್ರವೇಶ ಪಡೆದವರಿಗೆ ಮಾತ್ರ ಅನ್ವಯವಾಗಲಿದೆ.
ಕಾಲೇಜು ಆಡಳಿತ ಮಂಡಳಿ ಈ ಯೋಜನೆಯನ್ನು ಬದಲಾಯಿಸುವ ಅಥವಾ ರದ್ದುಗೊಳಿಸುವ ಹಕ್ಕನ್ನು
ಹೊಂದಿದೆ. అజి ಸಲ್ಲಿಸಲು ಜೂ. 20 ಕೊನೆಯ ದಿನವಾಗಿದೆ. ಸಂದರ್ಶನಕ್ಕೆ ಬರುವಾಗ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಆಸಕ್ತರು ಲಿಂಕ್:

https://forms.gle/ EdERWUF7drZszwpz8 ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯ, ವಿಶ್ವೋತ್ತಮ ನಗರ, ಬಂಟಕಲ್ಲು ಉಡುಪಿ-574115 ಸಂಪರ್ಕಿಸಬಹುದೆಂದು ಪ್ರಕಟನೆ ತಿಳಿಸಿದೆ.