ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಬಾಬಾ ರಾಮದೇವ್ ಅವರ ಶಿಷ್ಯ ಸ್ವಾಮಿ ಪರಮಾರ್ಥ ದೇವ್

ಉಡುಪಿ: ಬಾಬಾ ರಾಮದೇವ್ ಅವರ ಶಿಷ್ಯ ಸ್ವಾಮಿ ಪರಮಾರ್ಥ ದೇವ್ ಇವರು ಶ್ರೀಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಕೇಂದ್ರ ಯುವ ಪ್ರಭಾರಿ ಚಂದ್ರ ಮೋಹನ್, ಕೇಂದ್ರೀಯ ಸಹ ಯುವ ಪ್ರಭಾರಿ ಸಚಿನ್, ರಾಜ್ಯ ಪ್ರಭಾರಿ ಭವರ್ಲಾಲ್ ಆರ್ಯ, ರಾಜ್ಯ ಸಹ ಪ್ರಭಾರಿ ಡಾ.ಜ್ಞಾನೇಶ್ವರ್ ರಾಜ್ಯ ಮಹಿಳಾ ಪ್ರಭಾರಿ ಸುವರ್ಣ ಮಾರ್ಲ,ಉಡುಪಿ ಜಿಲ್ಲಾ ಪ್ರಭಾರಿ ರಾಘವೇಂದ್ರ ಭಟ್ ,ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.