ಮಲ್ಪೆ ಶ್ರೀರಾಮ ಮಿತ್ರ ಭಜನಾ ಮಂದಿರ ಶಿಲಾನ್ಯಾಸಕ್ಕೆ ಅಯೋಧ್ಯೆಯ ಮೃತ್ತಿಕೆ ಹಸ್ತಾಂತರ

ಅಯೋಧ್ಯಾ: ನವೆಂಬರ್ 20 ರಂದು ಮಲ್ಪೆ ಕುದ್ರುಕೆರೆಯ ಶ್ರೀರಾಮ ಮಿತ್ರ ಭಜನಾ ಮಂದಿರದ ನೂತನ ಮಂದಿರದ ಶಿಲಾನ್ಯಾಸಕ್ಕೆ ಹಿಂದೂ ಧರ್ಮದ ಪವಿತ್ರ ಕ್ಷೇತ್ರ ಅಯೋಧ್ಯೆ ಶ್ರೀ ರಾಮ ಮಂದಿರದ ಪವಿತ್ರ ಮೃತ್ತಿಕೆಯನ್ನು ಶ್ರೀ ರಾಮ ಮಂದಿರದ ಟ್ರಸ್ಟಿಗಳಾದ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಭಜನಾ ಮಂದಿರದ ಪ್ರತಿನಿಧಿ ಶಾಸಕ ಯಶ್ ಪಾಲ್ ಸುವರ್ಣ ಅವರಿಗೆ ಅಯೋಧ್ಯೆಯಲ್ಲಿ ಹಸ್ತಾಂತರಿಸಿದರು.

ಮಲ್ಪೆ ಕುದ್ರುಕೆರೆಯಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರದ ರೀತಿಯಲ್ಲಿ ಶೀಘ್ರದಲ್ಲಿಯೇ ಭವ್ಯ ಭಜನಾ ಮಂದಿರ ನಿರ್ಮಾಣವಾಗಿ ಪ್ರಭು ಶ್ರೀ ರಾಮಚಂದ್ರ ದೇವರು ಸರ್ವರನ್ನೂ ಅನುಗ್ರಹಿಸಲಿ ಎಂದು ಪೇಜಾವರ ಶ್ರೀಪಾದರು ಆಶೀರ್ವಚನ ಮಾಡಿದರು ಎಂದು ಯಶ್ ಪಾಲ್ ಸುವರ್ಣ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.