ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “ಲೈನ್ ಫಾಲೋವರ್” ತಾಂತ್ರಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಯು ಪ್ರದ್ಯುನ್ಮಾ ಉಪಾಧ್ಯಾಯ, ಶ್ರೀಕಿರಣ್ ಭಟ್, ಸಾತ್ವಿಕ್ ಭಟ್ ಮತ್ತು ಸೃಜನ್ ನಾಯರಿ ಇವರು ದಿನಾಂಕ 29 ಏಪ್ರೀಲ್ 2024 ರಂದು ಯೆನಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ರಾಷ್ಟ್ರಮಟ್ಟದ ರೋಬೋ ಸ್ಪರ್ಧೆ “ಯೆಂಟೆಕ್‍ಮೇನಿಯಾ ರೋಬೋ ಫ್ಯೂಷನ್” ನ ಲಕ್ಷ್ಮಣ್ ರೀಖಾ (ಲೈನ್ ಫಾಲೋವರ್) ತಾಂತ್ರಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಫ್ರಥಮ ಸ್ಥಾನಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ […]

ಜ್ಞಾನಸುಧಾ – ಅರ್ಹ ವಿದ್ಯಾರ್ಥಿಗಳಿಗೆ ಉಚಿತ ನೀಟ್ ಲಾಂಗ್ ಟರ್ಮ್ ತರಬೇತಿ.

ಉಡುಪಿ : ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನೀಟ್, ಜೆ.ಇ.ಇ, ಕೆ.ಸಿ.ಇ.ಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಮೋಘ ಸಾಧನೆ ಮಾಡಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ, ಇದೀಗ ನೀಟ್ 2024ರ ಪರೀಕ್ಷೆ ಬರೆದು, ಎಂ.ಬಿ.ಬಿ.ಎಸ್ ಸೀಟು ಪಡೆಯುವಲ್ಲಿ ವಿಫಲರಾದ ಆಯ್ದ ಅರ್ಹ ವಿದ್ಯಾರ್ಥಿಗಳಿಗೆ ಒಂದು ವರ್ಷದ ಸಂಪೂರ್ಣ ಉಚಿತ ಅಥವಾ ಶೇ.50 ಶುಲ್ಕ ವಿನಾಯಿತಿಯೊಂದಿಗೆ ನೀಟ್ ಲಾಂಗ್ ಟರ್ಮ್ ತರಬೇತಿಯನ್ನು ನೀಡುವುದಾಗಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೀಟ್ 2022ರಲ್ಲಿ 107 ವಿದ್ಯಾರ್ಥಿಗಳು […]

ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಮಣಿಪಾಲ: ವಿವಿಧ ಕೋರ್ಸುಗಳಿಗೆ ಪ್ರವೇಶಾತಿ ಪ್ರಾರಂಭ.

ಮಣಿಪಾಲ: ಇಲ್ಲಿನ ಹೆಸರಾಂತ ಶೈಕ್ಷಣಿಕ ಸಂಸ್ಥೆ ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನಲ್ಲಿ ವಿವಿಧ ಕೋರ್ಸುಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಕೋರ್ಸುಗಳು ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಅಂತರ್ಗತವಾಗಿದೆ. ಆರೋಗ್ಯ ವಿಜ್ಞಾನ ಕೋರ್ಸು ಗಳಾದ, ಡಿಎಂಎಲ್ಟಿ, ನರ್ಸಿಂಗ್, ಬಿಪಿಟಿ, ಬಿಎಸ್ಸಿ, ಹಾಗೂ ಸಾಂಪ್ರದಾಯಕ ಪದವಿ ಕೋರ್ಸ್ ಗಳಾದ ಫುಡ್ ಟೆಕ್ನಾಲಜಿ, ಹೋಟೆಲ್ ಮ್ಯಾನೇಜ್ ಮೆಂಟ್, ಬಿಬಿಎ, ಬಿಕಾಂ, ಬಿಸಿಎ, ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9844988383 ವಿಳಾಸ: ಉಡುಪಿ […]

ಹೊಸಬೆಳಕು ಸೇವಾ ಟ್ರಸ್ಟ್ ಗೆ 1 ಲಕ್ಷ ರೂ ದೇಣಿಗೆ

ಉಡುಪಿ: ಹೊಸಬೆಳಕು ಸೇವಾ ಟ್ರಸ್ಟ್ (ರಿ) ಮಾಣಿಕುಮೇರಿ, ಕೌಡೂರು ಗ್ರಾಮ ಬೈಲೂರು, ಕಾರ್ಕಳ ಇದರ ಹೊಸಬೆಳಕು ಆಶ್ರಮದ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರದಂದು ನಡೆಯಿತು. ಮುಖ್ಯ ಅತಿಥಿಯಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಗೌರವ ಅಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ 1 ಲಕ್ಷ ರೂಪಾಯಿ ದೇಣಿಗೆಯನ್ನು ಆಶ್ರಮದ ಮುಖ್ಯಸ್ಥ ವಿನಯಾ ಚಂದ್ರ , ತನುಲಾ ತರುಣ್ ಇವರಿಗೆ ನೀಡಿದರು. ಸಂಸ್ಥೆಯ ವತಿಯಿಂದ ವಿಶ್ವನಾಥ ಶೆಣೈ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಎಂಜಿನಿಯರ್ ಶ್ರೀಧರ್ ಆಚಾರ್ಯ ಉಡುಪಿ , […]

ಉಡುಪಿ: ಕಿದಿಯೂರು ಹೊಟೇಲ್ಸ್ ಪ್ರೈ.ಲಿ 38 ನೇ ವರ್ಷದ ವಾರ್ಷಿಕೋತ್ಸವ: ಇಂಟರ್ ನ್ಯಾಶನಲ್ ಸ್ಕೂಲ್ ಆರಂಭ; ಸಿಇಒ ಆಗಿ ಡಾ. ರಾಮದಾಸ್ ಪ್ರಭು ನೇಮಕ

ಉಡುಪಿ: ಎಲ್ಲರ ಸಹಕಾರದಿಂದ ನಿತ್ಯವೂ ಹೊಸ ಕೀರ್ತಿಮಾನ ಸ್ಥಾಪಿಸುತ್ತಿರುವ ಜಿಲ್ಲೆಯ ಸುಪ್ರಸಿದ್ದ ಕಿದಿಯೂರು ಹೊಟೇಲ್ಸ್ ಪ್ರೈ.ಲಿ ಎ. 30 ರಂದು ತನ್ನ 38 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದೆ. ಕಿದಿಯೂರು ಹೊಟೇಲ್ಸ್ ಪ್ರೈ.ಲಿ ನ ಸೇವೆ ಹಾಗೂ ಸೌಲಭ್ಯಗಳು ಅಪ್ಪಟ ಸಸ್ಯಾಹಾರಿ ಗೋಕುಲಕೃಷ್ಣ ಇಂಡಿಯನ್ ವೆಜಿಟೇರಿಯನ್ ಅರೋಮಕಿದಿಯೂರು ಗಜೆಬೋ ಸ್ವಾದಿಷ್ಟ ಮಾಂಸಾಹಾರಿ ಹೊಟೇಲ್ಕಿದಿಯೂರು ಕನ್ಫೆಕ್ಷನರಿ ಎಂಡ್ ಬೇಕರಿ ಕೇಕ್ ಮತ್ತು ಪೇಸ್ಟ್ರೀ ಶಾಪ್ಹವಾನಿಯಂತ್ರಿತ ಲಕ್ಶುರಿ ಕೊಠಡಿಗಳುವರ್ಣ ಡಿಜಿಟಲ್ ಕಲರ್ ಲ್ಯಾಬ್ವರ್ಣ ಡಿಜಿಟಲ್ ಪ್ಯಾರಡೈಸ್ಕಿದಿಯೂರು ಝೋನ್ ಮೈಕೋ ಬ್ರಿವರಿ […]