ಲೇಖಕ ಎಚ್ ಶಾಂತರಾಜ ಐತಾಳ್ ವಿರಚಿತ ಕೃತಿ ಬಿಡುಗಡೆ ಕಾರ್ಯಕ್ರಮ

ಉಡುಪಿ: ಸುಹಾಸಂ ಉಡುಪಿ ಮತ್ತು ಕಲ್ಕೂರ ಪ್ರತಿಷ್ಠಾನ (ರಿ.), ಮಂಗಳೂರು​ ವತಿಯಿಂದ ​ಲೇಖಕ ಎಚ್ ಶಾಂತರಾಜ ಐತಾಳರ​ ಬಿಸಿಲುದುರೆಯ ಬೆನ್ನೇರಿದವ (ಆತ್ಮಕಥನ)​ ಮತ್ತು ಬಾಲಂಗೋಚಿ (ಮಂದಹಾಸ ಮೂಡಿಸುವ ಮಾತ್ರೆಗಳು)​ ಎರಡು ಕೃತಿಗ​ಳನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಿದಿಯೂರು ಹೊಟೇಲ್​ ನ  ರೂಫ್ ಟಾಪ್​ ನಲ್ಲಿ ಶನಿವಾರದಂದು ಬಿಡುಗಡೆಗೊಳಿಸಿದರು. 

ಈ ಸಂದರ್ಭದಲ್ಲಿ  ಭುವನ ಪ್ರಸಾದ್ ಹೆಗಡೆ ಮಣಿಪಾಲ​, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ​, ಸುಹಾಸಂ ಕಾರ್ಯದರ್ಶಿ ಎಚ್ ಗೋಪಾಲ ಭಟ್​,  ​ಉಪಸ್ಥಿತರಿದ್ದರು.  ​

ಲೇಖಕ ದಂಪತಿಗಳನ್ನು ಹಾಗೂ ಶಾಸಕ ಗುರ್ಮೆ ಸುರೇಶ ಶೆಟ್ಟಿ ಇವರನ್ನು ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ​ ಅಭಿನಂದಿಸಿ ಗೌರವಿಸಿದರು. 

ಡಾ​। ಸಂಧ್ಯಾ ಅಡಿಗ ಕುಂದಾಪುರ​ ಪ್ರಾರ್ಥಿಸಿದರು.  ಎಚ್ ಶಾಂತರಾಜ್ ಐತಾಳ್​ ಸ್ವಾಗತಿಸಿದರು. ಕೃತಿಯನ್ನು ವಿದ್ಯಾ ಪ್ರಸಾದ್ ಉಡುಪಿ​ ಪರಿಚಯಿಸಿದರು. ಡಾ​। ಸಪ್ಪಾ ಜೆ ಉಕ್ಕಿನಡ್ಕ​ ವಂದಿಸಿದರು. ಸುಹಾಸಂ ಶ್ರೀನಿವಾಸ ಉಪಾಧ್ಯ​ ನಿರೂಪಿಸಿದರು.