ವಿವಾಹದಲ್ಲಿ ವಿಳಂಬವಾಗುತ್ತಿದೆಯೆ? ಈ ದೇವಿಯನ್ನು ಪೂಜೆಸಿದ್ರೆ ನಿಮ್ ಕಷ್ಟ ಪರಿಹಾರವಾಗುತ್ತೆ

ಬೇಡಿ ಬಂದ ಭಕ್ತರ ಕಷ್ಟವನ್ನು ಈ ದೇವಿಯೂ ದೂರ ಮಾಡುತ್ತಾರೆ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಪದ್ಧತಿಯಾಗಿದೆ. ಭಕ್ತರ ಜೀವನದಲ್ಲಿರುವ ಸಂಕಷ್ಟಗಳನ್ನು ಆದಿ ಶಕ್ತಿ ನಿವಾರಿಸುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಅಂತೆಯೇ ಮಂಗಳಿಕ ದೋಷದಂತಹ ವಿವಾಹ ದೋಷವನ್ನು ಸಹ ಈ ದೇವಿಯೂ ನಿವಾರಿಸುತ್ತಾರೆ. ಹೀಗಾಗಿ ಮದುವೆ ಸಂಬಂಧ ಸಮಸ್ಯೆಗಳನ್ನು ಎದುರಿಸುತ್ತಿರೋರು ಈ ದೇವಿಯ ಆರಾಧನೆ ಮಾಡಿದ್ರೆ ಖಂಡಿತ ಉತ್ತಮ ಫಲ ಸಿಗಲಿದೆ. ಹೌದು, ನವರೂಪದಲ್ಲಿರೋ ದುರ್ಗೆ ಮಾತೆಯ ಪ್ರತಿರೂಪವಾಗಿರೋ ಕಾತ್ಯಾಯಿನಿ ದೇವಿಯನ್ನು ಪೂಜಿಸುವುದರಿಂದ ಮದುವೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.
ಕಾತ್ಯಾಯನನ ಪುತ್ರಿಯಾಗಿರುವ ಕಾತ್ಯಾಯಿನಿಯ ರೂಪದಲ್ಲಿ ದುರ್ಗೆಯು ಧರೆಯಲ್ಲಿ ಪ್ರತ್ಯಕ್ಷಗೊಂಡರು ಆದ್ದರಿಂದ ಅವರಿಗೆ ಕಾತ್ಯಾಯಿನಿ ಎಂಬ ಹೆಸರು ಇದೆ. ಇನ್ನು ಕಾತ್ಯಾಯಿನಿ ಮಾತೆಯನ್ನು ಪೂಜಿಸುವುದರಿಂದ ದೊರೆಯುವ ಪ್ರಯೋಜನಗಳೇನು ಅಂತ ನೋಡುವುದಾದ್ರೆ, ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಯನ್ನು ನೆಲೆಗೊಳಿಸುವುದಕ್ಕಾಗಿ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಮದುವೆಗೆ ಸಂಬಂಧಿಸಿದಂತೆ ವ್ಯಕ್ತಿಯು ಸಮಸ್ಯೆಗಳನ್ನು ಹೊಂದಿದ್ದರೆ ಕಾತ್ಯಾಯಿನಿ ಮಾತೆಯನ್ನು ಪೂಜಿಸಿ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಮದುವೆ ಕಾರ್ಯದಲ್ಲಿ ವಿಳಂಬ, ಗಂಡ ಹೆಂಡಿರ ನಡುವೆ ಆಗಾಗ್ಗೆ ಜಗಳಗಳುಂಟಾಗುವುದು, ಅಂತೆಯೇ ಸೂಕ್ತ ಪಾಲುದಾರರನ್ನು ಹೊಂದಲು ಸಮಸ್ಯೆ ಇರುವುದು ಇತ್ಯಾದಿ. ಕಾತ್ಯಾಯಿನಿ ಮಾತೆಯನ್ನು ಶಕ್ತಿ, ಸ್ಥೈರ್ಯದ ದೇವತೆ ಎಂದೂ ಕೂಡ ಕರೆಯುತ್ತಾರೆ. ಭಯವನ್ನು ಹೋಗಲಾಡಿಸುವಲ್ಲಿ ಕೂಡ ಕಾತ್ಯಾಯಿನಿ ಮಾತೆ ಪೂಜನೀಯವಾಗಿದ್ದಾರೆ.
12 ನೇ ಮನೆಯಲ್ಲಿ ನೆಲೆಗೊಂಡಿರುವ ಕಾತ್ಯಾಯಿನಿ ಮಾತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ದೇವಿಯು ಜನ್ಮ ಕುಂಡಲಿಯಲ್ಲಿ ಗುರುವಿನೊಂದಿಗೆ ಸಹಯೋಗವನ್ನು ಹೊಂದಿದ್ದಾರೆ. “ಬ್ರಹ್ಮಮಂಡಲದ ಆದಿಶ್ರಷ್ಟಿ ದೇವಿ’ ಎಂಬ ಹೆಸರೂ ದೇವಿಗಿದೆ. ಗೋಕುಲದಲ್ಲಿರುವ ಮಹಿಳೆಯರು ಕೃಷ್ಣನ ಪ್ರೀತಿಯನ್ನು ಪಡೆಯುವುದಕ್ಕಾಗಿ ದೇವಿಗೆ ಪೂಜೆಯನ್ನು ಅರ್ಪಿಸುತ್ತಿದ್ದರು. ಭಾಗವತ್ ಪುರಾಣದಲ್ಲಿ ತಿಳಿಸಿರುವಂತೆ ಮಾತೆ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು ಮತ್ತು ದೇವಿಗೆ ವ್ರತವನ್ನು ಮಾಡಿ ಪೂಜೆಯನ್ನು ಸಲ್ಲಿಸುವಾಗ ಶ್ರೀಗಂಧ, ಹೂವುಗಳು ಮತ್ತು ಗಂಧದ ಕಡ್ಡಿಯನ್ನು ಅರ್ಪಿಸುತ್ತಿದ್ದರು. ಇನ್ನು ವಿವಾಹ ಸಂಬಂಧ ಸಮಸ್ಯೆ ಇರುವವರು ದೇವಿಯ ಈ ಮಂತ್ರವನ್ನು ಪಠಿಸಿದ್ರೆ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗಿದೆ. ಆ ಮಂತ್ರ ಹೀಗಿದೆ ‘ಕಾತ್ಯಾಯಿನಿ ಮಹಾಮಯಾ ಮಹಾಯೋಗಿಯಾಯತಿಶ್ವರಿ ನಂದ ಗೋಪಾಶೂತನ್ ದೇವಿ ಪತಿಯಾಮ್ ಮಿ ನಮ ಕುರುಟೆ’ ಶೀಘ್ರ ವಿವಾಹಕ್ಕಾಗಿ, ವಿವಾಹ ವಿಳಂಬವಾಗುತ್ತಿದ್ದರೆ, ವಿಘ್ನಗಳಿಲ್ಲದ ವಿವಾಹಕ್ಕಾಗಿ, ಇಚ್ಛೆ ಪಟ್ಟ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಪಡೆಯಲು, ಹೀಗೆ ಬೇರೆ ಬೇರೆ ಸಮಸ್ಯೆಗಳಿಗೂ ದೇವಿಯ ಸಂಬಂಧ ಪಟ್ಟ ಮಂತ್ರಗಳನ್ನು ನಿಯಮಿತವಾಗಿ ಪಠಿಸಿ ಉತ್ತಮ ಫಲ ಪ್ರಾಪ್ತಿ ಹೊಂದಬಹುದು.
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು, ಅಮ್ಮನವರ ಸರ್ವಾಭಿಷ್ಟ ಸಿದ್ದಿ ಪೂಜೆಗಳಿಂದ ನಿಮ್ಮ ಸಮಸ್ಯೆ ಗಳಾದ ಉದ್ಯೋಗ,ಹಣಕಾಸು,ಸಾಲಬಾಧೆ, ಕೋರ್ಟ್ ಕೇಸ್, ದಾಂಪತ್ಯ ಕಲಹ, ಮನೆಯಲ್ಲಿ ಅಶಾಂತಿ, ಅರೋಗ್ಯ ಬಾಧೆ, ಪ್ರೇಮ ವಿಚಾರ, ಸಂತಾನ ಸಮಸ್ಯೆ ಗಳಿಗೆ ಕೇವಲ 1 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯಂ
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು
ಪಂ. ವಾದಿರಾಜ ಭಟ್ : 97436 66601