ಕರಾಟೆ ಸ್ಪರ್ಧೆಯಲ್ಲಿ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳ ಸಾಧನೆ

ಉಡುಪಿ: ಕಟಪಾಡಿಯಲ್ಲಿ ಇತ್ತೀಚೆಗೆ ನಡೆದ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಅಕಿಲೇಶ್ ದೇವಾಡಿಗ ಕುಮಿಟಿಯಲ್ಲಿ ಪ್ರಥಮ ಕಟದಲ್ಲಿ ತೃತೀಯ, ಪೃಥ್ವಿರಾಜ್ ಕುಮಿಟಿಯಲ್ಲಿ ಪ್ರಥಮ, ಸಂದೇಶ್ ಕುಮಿಟಿಯಲ್ಲಿ ದ್ವಿತೀಯ ಕಟದಲ್ಲಿ ತೃತೀಯ, ಶ್ರೀಕಾಂತ್ ಕುಮಿಟಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು ಶಾಲೆಯ ಪ್ರಾಂಶುಪಾಲರು ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ. ಇವರು ಕರಾಟೆ ಶಿಕ್ಷಕ ಅಶೋಕ್ ಕುಮಾರ್ ನಡೂರು ಮಾರ್ಗದರ್ಶನದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.