ಜಿ ಎಸ್ ಬಿ ಸಭಾ ಉಡುಪಿ ವತಿಯಿಂದ ಆರ್ಟಿಕಲ್ 370 ಚಲನಚಿತ್ರ ಪ್ರದರ್ಶನ: ಕೋಟ ಶ್ರೀನಿವಾಸ್ ಪೂಜಾರಿ ಭಾಗಿ

ಉಡುಪಿ: ಯೂಥ್ ಆಫ್ ಜಿ ಎಸ್ ಬಿ ಹಾಗೂ ಜಿ ಎಸ್ ಬಿ ಸಭಾ ಉಡುಪಿ ಇದರ ಸಹಯೋಗದಲ್ಲಿ ನಡೆದ ಆರ್ಟಿಕಲ್ 370 ಚಲನಚಿತ್ರದ ಪ್ರದರ್ಶನದಲ್ಲಿ ಉಡುಪಿ – ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಭಾಗಿಯಾಗಿ ಶುಭ ಕೋರಿದರು. ಈ ಸಂದರ್ಭ ಸಮಾಜದ ವತಿಯಿಂದ ಅವರನ್ನು ಸ್ವಾಗತಿಸಲಾಯಿತು.

ಜಿ ಎಸ್ ಬಿ ಸಮಾಜದ ಹಿರಿಯರಾದ ವಸಂತ್ ಭಟ್, ಗುರುನಾಥ್ ರಾವ್, ಮಟ್ಟಾರ್ ರಮೇಶ್ ಕಿಣಿ, ಮಟ್ಟಾರ್ ಗಣೇಶ್ ಕಿಣಿ, ಮಟ್ಟಾರ್ ವಸಂತ್ ಕಿಣಿ, ತ್ರಿಷಾ ಸಮೂಹ ಸಂಸ್ಥೆಯ ಸ್ಥಾಪಕ ಗೋಪಾಲಕೃಷ್ಣ ಭಟ್, ಉಡುಪಿ ಜಿಲ್ಲಾ ಬಿ ಜೆ ಪಿ ಯ ನಿಕಟಪೂರ್ವ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ನಗರ ಸಭಾ ಸದಸ್ಯ ಶ್ಯಾಮ್ ಪ್ರಸಾದ್ ಕುಡ್ವ, ತೋನ್ಸೆ ಗಣೇಶ್ ಶೆಣೈ, ಹಿಂದೂ ಎಕನಾಮಿಕ್ ಫೋರಮ್ ನ ಅಧ್ಯಕ್ಷ ಗಣೇಶ್ ನಾಯಕ್ ಶಿರಿಯಾರ, ಬಿ ಜೆ ಪಿ ಮಹಿಳಾ ಮೋರ್ಚಾ ದ ಜಿಲ್ಲಾಅಧ್ಯಕ್ಷೆ ಸಂಧ್ಯಾ ರಮೇಶ್, ಆರೋಗ್ಯ ಭಾರತಿಯ ಅಧ್ಯಕ್ಷ ಡಾ.ದಿನೇಶ್ ನಾಯಕ್, ಉದ್ಯಾವರ ಅಜಿತ್ ಶೆಣೈ, ಬಿ ಜೆ ಪಿ ಉಡುಪಿ ಜಿಲ್ಲೆಯ ಸಾಮಾಜಿಕ ಜಾಲತಾಣ ವಿಭಾಗದ ನೀತಾ ಪ್ರಭು, ಬಿ ಜೆ ಪಿ ಉಡುಪಿ ನಗರದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಸರೋಜಾ ಶೆಣೈ, ಸುಧಾ ಪೈ, ಉದಯ್ ಶೆಣೈ, ಜಿ ಎಸ್ ಬಿ ಸಭಾ ಉಡುಪಿ ಇದರ ಸ್ವಯಂಸೇವಕರಾದ ಉಲ್ಲಾಸ್ ಶೆಣೈ, ರತನ್ ಪೈ, ಆಶ್ಲೇಷ ಪೈ, ಅಚ್ಯುತ್ ಕಾಮತ್, ಅನಿರುದ್ ಪೈ, ವಿಗ್ನೇಶ್ ಶೆಣೈ, ಶ್ರೀಶ ಶೆಣೈ, ಸಂಜಯ್ ಶೆಣೈ, ಪ್ರೀತಿಶ್ ಕಿಣಿ, ಅನಿಶ್ ಪ್ರಭು, ದೀಪಾ ಪೈ, ಲಲಿತಾ ಪೈ, ಕು. ಅಕ್ಷತಾ ಶೆಣೈ, ಕು. ದೀಪಾಲಿ ಭಟ್, ಕು. ಮೈತ್ರಿ ಪೈ ಭಾಗವಹಿಸಿದರು.