ಆರ್ಥಿಕ ಸಹಾಯ ನೀಡಿ ಸಹಕರಿಸಲು ಮನವಿ

ಕುಂದಾಪುರ:  ಕುಂದಾಪುರ ಹಂಗ್ಲೂರು ನಿವಾಸಿ ಅಶೋಕ್ ಅವರ ಪತ್ನಿ ಸುಮನ ಅವರು ಆಸ್ಪತ್ರೆಯೊಂದರಲ್ಲಿ ದಾಖಲಾಗಿ ನ. 19 ರಂದು ತುರ್ತಾಗಿ ಸಿಸರಿನ್ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.  ಅನಂತರ ಮೂತ್ರ ಪಿಂಡದ ತೀವ್ರ ತೊಂದರೆ ಯಿಂದ ತುರ್ತು ನಿಗಾ ವಿಭಾಗಕ್ಕೆ ದಾಖಲಾಗಿ ನ. 20ರಂದು ಲೇಪರೋಟಮ್ ಚಿಕಿತ್ಸೆಗೊಳಗಾಗಿದ್ದು, ದಿನಕ್ಕೆ ಹಲವು ಬಾರಿ ಡಯಾಲಿಸಸ್ ಗೊಳಗಾಗಬೇಕಾಗಿದೆ.  ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯಲು ಸುಮಾರು 2  ಲಕ್ಷ ರೂ. ಹೆಚ್ಚಿನ ಖರ್ಚು ತಗುಲುತ್ತದೆ ಎಂಬುದಾಗಿ ತಜ್ಞ ವೈದ್ಯರು ಅಂದಾಜು ಮಾಡಿ ತಿಳಿಸಿದ್ದಾರೆ.
ಅವರ ಪತಿ ಅಶೋಕ್ ಅವರ  ಆದಾಯ ಕೂಡ  ತೀರ ಕಡಿಮೆ ಇದ್ದು, ಆರ್ಥಿಕವಾಗಿ ಹಿಂದುಳಿದ ಈ ದಂಪತಿ ಇಬ್ಬರು ಮಕ್ಕಳೊಂದಿಗೆ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಪತ್ನಿಯ ಚಿಕಿತ್ಸೆಗಾಗಿ ದಾನಿಗಳಿಂದ ಆರ್ಥಿಕ ಸಹಾಯ ಯಾಚಿಸುತ್ತಿದ್ದಾರೆ.
ಆರ್ಥಿಕ ನೆರವು ನೀಡಲು ಬಯಸುವ ದಾನಿಗಳು ಕುಂದಾಪುರ ತಾಲೂಕಿನ ವಡೆಯರ ಹೋಬಳಿಯ ಕೆನರಾ ಬ್ಯಾಂಕಿನ ಖಾತೆ ಸಂಖ್ಯೆ 4339108000292, IFSC code: CNRB0004339, MICRO code: 576015203 ಗೆ ಹಣ ಜಮೆ ಮಾಡಬಹುದಾಗಿದೆ. ದೂ.ಸಂ. 9591471213.