ಉಡುಪಿ:ಏಕಕಾಲಕ್ಕೆ ಎಪ್ರಿಲ್-ಮೇ ಪಡಿತರ, ಒಟಿಪಿ ತೋರಿಸಿ ಪಡಿತರ ಪಡೆಯಬಹುದು

ಉಡುಪಿ:ಕೋವಿಡ್- 19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಏಕಕಾಲದಲ್ಲಿ ನೀಡಲು ಅವಕಾಶ ಕಲ್ಪಿಸಲಾಗುವುದರಿಂದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬರುವ ಪಡಿತರ ಚೀಟಿದಾರರು ಪಡಿತರ ಚೀಟಿಯಲ್ಲಿ ಇರುವ ಯಾವುದೇ ಓರ್ವ ಸದಸ್ಯರ ಆಧಾರ್ ನಂಬರ್ ಗೆ ನೋಂದಾಯಿತವಾಗಿರುವ ಮೊಬೈಲ್ ಗೆ ಬರುವ ಒಟಿಪಿ ಮೂಲಕ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಎಲ್ಲಾ ಪಡಿತರ ಚೀಟಿದಾರರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುವಾಗ ಕಡ್ಡಾಯವಾಗಿ ಆದಾರ್ ನೋಂದಾಯಿತವಾಗಿರುವ ಮೊಬೈಲ್ ನ್ನು ತಂದು ಒಪಿಟಿ ಮೂಲಕ ಪಡಿತರ ಪಡೆಯುವಂತೆ ತಿಳಿಸಿದೆ. ಒಂದು ವೇಳೆ ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ನೊಂದಾಯಿತವಾಗಿಲ್ಲದಿದ್ದಲ್ಲಿ ಅವರ ಬಳಿ ಲಭ್ಯವಿರುವ ಮೊಬೈಲ್ ಸಂಖ್ಯೆ ನಮೂದಿಸಿ ಓಟಿಪಿ ಮೂಲಕ ಪಡಿತರ ಪಡೆಯಲು ಅವಕಾಶವಿರುತ್ತದೆ.

ಹೆಚ್ಚಾಗಿ ಗುಂಪು ಗೂಡದೇ ಪಡಿತರ ಪಡೆಯುವಾಗ ಪಡಿತರ ಚೀಟಿದಾರರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಗಳನ್ನು ಧರಿಸಿಕೊಂಡು ಸ್ಯಾನಿಟೈಸರ್ ಗಳನ್ನು ಉಪಯೋಗಿಸಿ ಪಡಿತರ ಪಡೆದುಕೊಂಡು ನ್ಯಾಯಾಬೆಲೆ ಅಂಗಡಿ ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾಡಳಿತ ತಿಳಿಸಿದೆ.