ಉಡುಪಿ ಜಿಲ್ಲಾ ಸರಕಾರಿ ವಾಹನ ಚಾಲಕರ ಮಹಾಸಭೆ

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ(ರಿ), ಅಜ್ಜರಕಾಡು, ಉಡುಪಿ ಇದರ ಮಹಾಸಭೆಯು ಶನಿವಾರ ಸಂಘದ ಕಚೇರಿ ಸಾರಥಿ ಭವನದಲ್ಲಿ, ಸಂಘದ ಅಧ್ಯಕ್ಷ ರಾಘವೇಂದ್ರ ಬೆಳ್ಳೆ ಅಧ್ಯಕ್ಷತೆಯಲ್ಲಿ ಜರುಗಿತು.

ರಾಜ್ಯ ಸರಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಮಾಜಿ ಅಧ್ಯಕ್ಷರುಗಳಾದ ಶಿವರಾಂ ಶೆಟ್ಟಿ, ಸೂರ್ಯ ಶೇರಿಗಾರ್, ಕೆ.ಎಸ್. ಹೆನ್‍ಸನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ನಿವೃತ್ತ ಚಾಲಕ ರುಕ್ಮಯ್ಯ ನಾಯ್ಕ್, ಆರೋಗ್ಯ ಇಲಾಖೆಯ ರವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿನ್ಸೆಂಟ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಿ.ಕೆ.ಗೋವಿಂದ ಇವರನ್ನು ಸನ್ಮಾನಿಸಲಾಯಿತು. ರವಿ ಸ್ವಾಗತಿಸಿದರು, ಸೇಸಪ್ಪ ವಂದಿಸಿದರು.