ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ‘ಅಮ್ಮನಿಂದ ಅಮ್ಮನೆಡೆಗೆ ನಮ್ಮ ನಡಿಗೆ’

ಉಡುಪಿ: ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ಪ್ರಥಮ ಬಾರಿಗೆ ” ಅಮ್ಮನಿಂದ ಅಮ್ಮನೆಡೆಗೆ ನಮ್ಮ ನಡಿಗೆ ” ಕಾರ್ಯಕ್ರಮವು ನಡೆಯಿತು. ಕನ್ನರ್ಪಾಡಿ ಜಯದುರ್ಗೆಗೆ ನಮಿಸಿ, ಮುಂಜಾನೆ 5.45ಕ್ಕೆ ಪಾದಯಾತ್ರೆ ಆರಂಭಗೊಂಡು ಉದ್ಯಾವರ, ಕಟಪಾಡಿ ಮಾರ್ಗವಾಗಿ ಕಾಲುನಡಿಗೆಯಲ್ಲಿ ವಲಯದ 36 ಉತ್ಸಾಹಿ ಸದಸ್ಯರು ಮತ್ತು ಇತರ ವಲಯದ ಸದಸ್ಯರು ಕುಂಜಾರುಗಿರಿಗೆ ಪಯಣಿಸಿ, 8.15 ರ ಹೊತ್ತಿಗೆ ಕುಂಜಾರುಗಿರಿಯ ಮೆಟ್ಟಿಲನ್ನೇರಿ ಕುಂಜಾರಮ್ಮನಿಗೆ ದರ್ಶನಗೈದರು. ಭಕ್ತರನ್ನು ಅದಮಾರು ಮಠದ ವತಿಯಿಂದ ಸ್ವಾಗತಿಸಲಾಯಿತು.

ಸಂಘದ ಅಧ್ಯಕ್ಷ ಎಂ.ಎನ್.ರಾಜೇಂದ್ರ , ಕಾರ್ಯದರ್ಶಿ ಎಂ.ಸುರೇಶ್ ರಾವ್, ಕೋಶಾಧಿಕಾರಿ ಶ್ರೀಕಾಂತ ಭಟ್ ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಸಂದೀಪ್ ಮಂಜ , ತು.ಶಿ.ಮಾ.ಮ.ದ ಅಧ್ಯಕ್ಷ ರವಿ ಪ್ರಕಾಶ್, ಕೊರಂಗ್ರಪಾಡಿ ವಲಯ ಮತ್ತು ಚಿಟ್ಪಾಡಿ ವಲಯದ ಸದಸ್ಯರು ಸಹ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಹಕರಿಸಿದರು.