ಆಳ್ವಾಸ್: ವರ್ಷದ 4ನೇ ಉಚಿತ ನೇತ್ರ ತಪಾಸಣಾ ಶಿಬಿರ.

ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಹಾಗೂ ಮಂಗಳೂರಿನ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಈ ವರ್ಷದ 4ನೇ ನೇತ್ರ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಉದ್ಘಾಟಿಸಿ ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು.

ಈ ಮೊದಲು ನಡೆಸಿದ ಒಂಬತ್ತು ಶಿಬಿರಗಳಲ್ಲಿ 1,478 ಜನರಿಗೆ ಕಣ್ಣಿನ ತಪಾಸಣೆ ನಡೆಸಲಾಗಿದ್ದು, 784 ಜನರಿಗೆ ಉಚಿತ ಕನ್ನಡಕ ನೀಡಲಾಗಿತ್ತು. ಈ ಪೈಕಿ 221 ಜನರಿಗೆ ಶಸ್ತçಚಿಕಿತ್ಸೆಯ ಶಿಫಾರಸ್ಸು ಮಾಡಲಾಗಿದ್ದು, 109 ಶಸ್ತçಚಿಕಿತ್ಸೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದವು.

ಈ ವರ್ಷವೂ ಇದೇ ಹಾದಿಯಲ್ಲಿ ಸಾಗುತ್ತಾ ಈಗಾಗಲೇ ಮೂರು ಶಿಬಿರಗಳು ನಡೆದಿದ್ದು, ಇಂದು ನಡೆದ 4ನೇ ಶಿಬಿರವು ಸೇರಿದಂತೆ ಒಟ್ಟು 470 ಜನರು ತಪಾಸಣೆಗೆ ಒಳಪಟ್ಟಿದ್ದಾರೆ. 235 ಜನರಿಗೆ ಕನ್ನಡಕ ವಿತರಿಸಲಾಗಿದೆ ಮತ್ತು 45 ಜನರಿಗೆ ಶಸ್ತçಚಿಕಿತ್ಸೆಯ ಶಿಫಾರಸ್ಸು ಮಾಡಲಾಗಿದೆ. ಇವರಲ್ಲಿ 11 ಜನರಿಗೆ ಶಸ್ತçಚಿಕಿತ್ಸೆ ಪೂರ್ಣಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಶರಣ್ ಶೆಟ್ಟಿ ಅವರು ಭಾಗವಹಿಸಿದ್ದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಸಜೀತ್ ಎಂ. , ಮೂಡುಬಿದಿರೆ ಪುರಸಭೆಯ ಮುಖ್ಯ ಆಡಳಿತಾಧಿಕಾರಿ ಇಂದು ಎಂ., ಬಂಟರ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ , ಸಿ.ಎಚ್. ಮೆಡಿಕಲ್ಸ್ ನ ಸಿ. ಎಚ್ ಗಫೂರ್, ಉದ್ಯಮಿಗಳಾದ ಅಬ್ದುಲ್ ಹಮೀದ್, ಸದಾಶಿವ ರಾವ್ ನೆಲ್ಲಿಮಾರು, ನವೀನ್ ಟಿ.ಆರ್., ಶಂಕರ್ ಎ. ಕೋಟ್ಯಾನ್, ಜೈನ್ ಮಿಲನ್ ಸಂಘಟನೆಯ ಅನಂತವೀರ್ ಜೈನ್ , ವಿವಿಧ ಸಮುದಾಯ ಸಂಘಟನೆಗಳ ಹರೀಶ್ ಎಂ.ಕೆ , ಯೋಗೇಶ್ ಭಂಡಾರಿ ಮತ್ತು ಕೆ. ಎನ್. ಪ್ರಕಾಶ್ ಭಂಡಾರಿ, ಉಮೇಶ್ ನಾಯ್ಕ ಉಪಸ್ಥಿತರಿದ್ದರು. ಡಾ ವಿಕ್ರಮ್ ಕುಮಾರ್ ಸ್ವಾಗತಿಸಿ, ಕಿರಿಯ ವೈದ್ಯ ಸುಮಂತ್ ಕಾರ್ಯಕ್ರಮ ನಿರೂಪಿಸಿದರು.