ಬನ್ನಂಜೆ ನಾರಾಯಣಗುರು ಕಾಂಪ್ಲೆಕ್ಸ್ ನಲ್ಲಿ ಅಕ್ಷಯ ಭೂಮಿ ಕಚೇರಿ ಉದ್ಘಾಟನೆ

ಬನ್ನಂಜೆ: ಬನ್ನಂಜೆ ನಾರಾಯಣಗುರು ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭವಾದ ಅಕ್ಷಯ ಭೂಮಿ ಕಚೇರಿಯನ್ನು ಆದಿತ್ಯವಾರದಂದು ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಆನಂದ ಕಿದಿಯೂರು ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು, ಸೇವಾಭಾವನೆ ಮತ್ತು ನಗುನಗುತ್ತಾ ಕೆಲಸ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಕಚೇರಿಯು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.

ಕಚೇರಿಯ ಮಾಲಕರಾದ ಶ್ರೀಮತಿ ಅಕ್ಷಯ ಮತ್ತು ಉಮೇಶ್ ಕುಪ್ಪೆಟ್ಟು ಉಪಸ್ಥಿತರಿದ್ದರು.

ಅಕ್ಷಯ ಭೂಮಿಯಲ್ಲಿ ಜನರ ದಿನನಿತ್ಯದ ಜೀವನಕ್ಕೆ ಬೇಕಾಗುವ ಎಲ್ಲ ರೀತಿಯ ಸೇವೆಗಳನ್ನು ಒದಗಿಸಲಾಗುತ್ತದೆ. ರಿಯಲ್ ಎಸ್ಟೇಟ್, ಮ್ಯಾರೇಜ್ ಬ್ಯೂರೋ, ಲ್ಯಾಂಡ್ ಕನ್ವರ್ಷನ್, 9/11, ಇನ್ ಕಮ್ ಟ್ಯಾಕ್ಸ್, ರೆವೆನ್ಯೂ ವಿಭಾಗದ ಕೆಲಸ, ವಿಮಾನ, ರೈಲು, ಬಸ್ ಟಿಕೆಟ್ ಬುಕಿಂಗ್, ಬಾಡಿಗೆ ಕಾರು ಟೆಂಪೋ, ಜೆಸಿಬಿ, ಶಾಮಿಯಾನ ಕ್ಯಾಟರಿಂಗ್, ಟೈಪಿಂಗ್, ಎಲೆಕ್ಟ್ರಿಕಲ್, ಪ್ಲಂಬಿಂಗ್ ಕೆಲಸ, ಆರ್.ಟಿ.ಒ, ಇಂಟೀರಿಯರ್ ಡೆಕೋರೆಷನ್ ಮತ್ತು ಇನ್ನೂ ಹಲವಾರು ಸೇವೆಗಳನ್ನು ಒದಗಿಸಲಾಗುತ್ತದೆ.