ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಹೋ ರಾತ್ರಿ ಭಜನಾ ಸಪ್ತಾಹ ಸಂಪನ್ನ

ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ದೇವರ ಸನ್ನಿಧಿಯಲ್ಲಿ ಊರ ಪರಊರ ಭಜನಾ ಮಂಡಳಿಗಳಿಂದ ಅಹೋ ರಾತ್ರಿ 7 ದಿನಗಳ ಕಾಲ ನಿರಂತರ ಭಜನೆ ನಡೆದು ಮಂಗಳವಾರದಂದು 122ನೇ ಭಜನಾ ಸಾಪ್ತಾಹ ಮಂಗಲೋತ್ಸವ ಸಂಪನ್ನಗೊಂಡಿತು. ದೇವಳದ ಅರ್ಚಕ ವಿನಾಯಕ ಭಟ್ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

ಭಜನಾ ಆರಾಧ್ಯ ದೇವರಾದ ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜೈ ವಿಠಲ್ ಹರಿ ವಿಠಲ್ ನಾಮ ಪಠಿಸುತ್ತಾ ದೀಪ ಸ್ತಂಭಕ್ಕೆ ಪ್ರದಕ್ಷಿಣೆ ಗೈದರು. ಶ್ರೀ ದೇವರಿಗೆ ಮಹಾ ಮಂಗಳಾರತಿ ಬೆಳಗಿದ ಬಳಿಕ ಶ್ರೀ ದೇವರ ಜೊತೆ ದೀಪವನ್ನು ದೇವಳದ ಮುಂಭಾಗದಲ್ಲಿರಿಸಿ ನೂರಾರು ಭಕ್ತರೂ ಭಕ್ತಿಯಿಂದ ಉರುಳು ಸೇವೆ ಹಾಕಿ ದೇವರ ಪ್ರಸಾದ ಪಡೆದು ಧನ್ಯರಾದರು.

ತೆಪ್ಪಂಗಾಯಿ ಮತ್ತು ಮೊಸರು ಕುಡಿಕೆ ಆಟ ನಡೆಸಿದ ಬಳಿಕ ದೇವಾಲದ ಹೊರಾಂಗಣದಲ್ಲಿ ಶ್ರೀ ದೇವರ ಉತ್ಸವ ನಡೆಸಿ ದೇವಳದ ಒಳಾಂಗಣದಲ್ಲಿ ಭಕ್ತಿಯಿಂದ ಉರುಳು ಸೇವೆ ಹಾಕಿದರು. ಮಹಾ ಪೂಜೆ ನಂತರ ಸಮಾರಾಧನೆಯಲ್ಲಿ ಸಾವಿರಾರು ಭಕ್ತರೂ ಭೋಜನ ಪ್ರಸಾದ ಸ್ವೀಕರಿಸಿದರು. ರಾತ್ರಿ ಮತ್ತೊಮ್ಮೆ ಭಜನೆ ನಡೆಸಿ ಭಜನಾ ಮಂಗಲೋತ್ಸವ ಸಂಪನ್ನಗೊಂಡಿತು. ಶಾಸಕ ರಘುಪತಿ ಭಟ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ರಾಘವೇಂದ್ರ ಕಿಣಿ, ಗಿರೀಶ್ ಅಂಚನ್, ಶಿವ ಕುಮಾರ್ ಮುಂತಾದವರು ದೇವಳಕ್ಕೆ ಭೇಟಿ ನೀಡಿ ಕೃತಾರ್ಥರಾದರು.

ಶ್ರೀ ಲಕ್ಷ್ಮೀ ವೆಂಕಟೇಶ ದೇವರು ಹಾಗೂ ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಅರ್ಚಕರಾದ ದಯಾಘನ್ ಭಟ್, ಗಿರೀಶ್ ಭಟ್, ದೀಪಕ್ ಭಟ್, ದೇವಳದ ಆಡಳಿತ ಮುಕ್ತೇಶ್ವರ ಪಿ ವಿ ಶೆಣೈ, ವಿಶ್ವನಾಥ್ ಭಟ್, ನಾರಾಯಣ ಪ್ರಭು, ಅಶೋಕ್ ಬಾಳಿಗಾ, ವಸಂತ ಕಿಣಿ, ರೋಹಿತಾಕ್ಷ ಪಡಿಯಾರ್, ಪುಂಡಲೀಕ ಕಾಮತ್, ಗಣೇಶ ಕಿಣಿ, ವಿವೇಕ ಶಾನ್ ಬೋಗ್, ಸತೀಶ್ ಕಿಣಿ, ಭಾಸ್ಕರ ಶೆಣೈ, ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು, ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.