ಉಡುಪಿ: ನೀರಿಗಾಗಿ ಬಜೆ ಡ್ಯಾಂನಲ್ಲಿ ಶ್ರಮದಾನ; ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನೀರಿನ ‌ಸಮಸ್ಯೆ

ಉಡುಪಿ: ಹಿರಿಯಡ್ಕ ಸಮೀಪದ ಬಜೆ ಡ್ಯಾಂ ನಲ್ಲಿ ನೀರಿನ ಹರಿವು ಹೆಚ್ಚಿಸಲು ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ನಾಗರಿಕರಿಂದ ಶ್ರಮದಾನ ಮೇ. 9ರಂದು ನಡೆಯಿತು.
ಬಜೆ ಡ್ಯಾಂ ನಲ್ಲಿ ನೀರು ಇದ್ದರೂ ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇರುವ ನೀರನ್ನು ಕೂಡ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಮಸ್ಯೆ ಎದುರಾಗಿತ್ತು. ಹೀಗಾಗಿ ಶಾಸಕರ ಸೂಚನೆಯಂತೆ ಹಲವು‌ ನಾಗರಿಕರು ಕೂಡ ಶ್ರಮದಾನದಲ್ಲಿ ಭಾಗವಹಿಸಿದ್ದಾರೆ.
ಈ‌ ಬಗ್ಗೆ ಪ್ರತಿಕ್ರಿಯಸಿದ ಶಾಸಕ ರಘುಪತಿ ಭಟ್, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರಿನ‌ ಸಮಸ್ಯೆ ಉಂಟಾಗಿದೆ.  ಸಮಸ್ಯೆಯ ಬಗ್ಗೆ ತಿಳಿದರೂ ಇತ್ತ ಕಡೆ ಗಮನ ಹರಿಸಲಿಲ್ಲ. ಹೀಗಾಗಿ ನೀರಿನ‌ ಸಮಸ್ಯೆ ಎದುರಿಸುವಂತಾಗಿದೆ. ನಗರಸಭೆಯ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ.‌ ಬಜೆ ಡ್ಯಾಂ’ಗೆ ನೀರು ಹರಿದು ಬರುವ ಪ್ರದೇಶಗಳಲ್ಲಿ ಅಡೆತಡೆ ಇದ್ದು ನೀರು ಸರಿಯಾಗಿ ಹರಿಯುತ್ತಿಲ್ಲ, ಹೀಗಾಗಿ ಶ್ರಮದಾನದ ಮೂಲಕ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗುತ್ತಿದೆ ಎಂದರು.
ನಗರಸಭಾ ಸದಸ್ಯರು, ಕಾರ್ಯಕರ್ತರು ಮತ್ತು ನಾಗರಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.