ನಿರೂಪಕಿ ಅನುಶ್ರೀ ರಕ್ಷಣೆಗೆ ನಿಂತ ಕರಾವಳಿಯ ಪ್ರಭಾವಿ ರಾಜಕಾರಣಿ.!

ಮಂಗಳೂರು: ರಾಜ್ಯದ ಮೂರು ಪ್ರಭಾವಿ ರಾಜಕಾರಣಿಗಳು ನಟಿ ಕಂ ನಿರೂಪಕಿ ಅನುಶ್ರೀ ರಕ್ಷಣೆಗೆ ನಿಂತಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಮಗ ಹಾಗೂ ಕರಾವಳಿಯ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಅನುಶ್ರೀ ಕರೆ ಮಾಡಿ ರಕ್ಷಣೆ ಮಾಡುವಂತೆ ಕೋರಿದ್ದರು. ಸಿಸಿಬಿ ಪೊಲೀಸರ ನೋಟಿಸ್ ಬಂದ ಕೂಡಲೇ ಇಬ್ಬರಿಗೆ ಕರೆ ಮಾಡಿದ್ದು, ಇನ್ನೊಬ್ಬರಿಗೆ ಮರುದಿನ ಕರೆ ಮಾಡಿದ್ದರು. ಈ ರಾಜಕಾರಣಿಗಳು ಪ್ರಭಾವ ಬೀರಿದ ಹಿನ್ನೆಲೆಯಲ್ಲಿ ಪೊಲೀಸರು ಅನುಶ್ರೀಗೆ ಡೋಪಿಂಗ್ ಟೆಸ್ಟ್ ಮಾಡಿಲ್ಲ ಎನ್ನಲಾಗುತ್ತಿದೆ.

ಡ್ರಗ್ಸ್ ನಂಟಿ ಆರೋಪದಡಿ ಮಂಗಳೂರು ಸಿಸಿಬಿ ಪೊಲೀಸರು ಅನುಶ್ರೀ ಗೆ ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಸೆ. 24ರಂದು ಅನುಶ್ರೀ ವಿಚಾರಣೆಗೆ ಹಾಜರಾಗಿದ್ದರು. ಆದರೆ ಮೂರು ರಾಜಕಾರಣಿಗಳು ಅನುಶ್ರೀಯ ಬೆನ್ನಿಗೆ ನಿಂತಿದ್ದಾರೆ. ತಮ್ಮ ಪ್ರಭಾವ ಬಳಸಿ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.