ಎ.ಸಿ.ಸಿ.ಇ.ಎ ಇದರ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

ಉಡುಪಿ: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌ ಆ್ಯಂಡ್ ಆರ್ಕಿಟೆಕ್ಟ್ (ACCEA) ಉಡುಪಿ ಇದರ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ಏ 6 ರಂದು ಕರಾವಳಿ ಬೈಪಾಸ್ ಬಳಿಯ ಮಣಿಪಾಲ್ ಇನ್ ಹೊಟೇಲ್‌ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾದ ನಿಟ್ಟೆ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ ಮುಂಡ್ಕೊರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ನೂತನವಾಗಿ ಆಯ್ಕೆಯಾದ ಯೋಗೀಶ್ ಚಂದ್ರಾಧಾರ ಇವರಿಗೆ ಪ್ರತಿಜ್ಞಾ ವಿಧಿಭೋದಿಸಿ ಶುಭ ಹಾರೈಸಿದರು.

ಮಣಿಪಾಲ ಎಂಐಟಿ ಅಸಿಸ್ಟೆಂಟ್ ಪ್ರೊಫೆಸರ್ ಹೆಚ್ ಕೆ. ಸುಗಂಧಿನಿ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಯು.ಕೆ ರಾಘವೇಂದ್ರ ರಾವ್, ರಮೇಶ್ ರಾವ್, ನಾರಾಯಣ ಮೂರ್ತಿ, ದಿವಾಕರ್ ರಾವ್ ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶಾಂತಾ ಎಲೆಕ್ಟ್ರಿಕಲ್ಸ್ ಮಾಲಕ ಶ್ರೀಪತಿ ಭಟ್, ಶ್ರೀ ದೇವಿ ಗ್ಲಾಸ್ ಹೌಸ್ ಮಾಲಕ ಸುರೇಶ್ ನಾಯ್ಕ್, ನಿಕಟ ಪೂರ್ವ ಅಧ್ಯಕ್ಷ ಪಾಂಡುರಂಗ ಆಚಾರ್ಯ ಇವರನ್ನು ಸಮ್ಮಾನಿಸಲಾಯಿತು.

ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌ ಆ್ಯಂಡ್ ಆರ್ಕಿಟೆಕ್ಟ್ ನ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ,ನೂತನ ಕಾರ್ಯದರ್ಶಿ ಮಹೇಶ್ ಕಾಮತ್ , ನೂತನ ಖಂಚಾಚಿ ಅಮಿತ್ ಅರವಿಂದ್ ನಾಯಕ್, ಡಾ ಶ್ರೀನಾಥ್ ಶೆಟ್ಟಿ , ಹರಿಪ್ರಸಾದ್ ಶೆಟ್ಟಿ , ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪಾಂಡುರಂಗ ಆಚಾರ್ಯ ಸ್ವಾಗತಿಸಿದರು. ಭಗವಾನ್ ದಾಸ್ ನಿರೂಪಿಸಿದರು. ಮಹೇಶ್ ಕಾಮತ್ ವಂದಿಸಿದರು.

ಕುಂದಾಪುರ , ಕಾರ್ಕಳ , ಮೂಲ್ಕಿ , ಬ್ರಹ್ಮಾವರ ವಲಯದ ಸದಸ್ಯರು ಉಪಸ್ಥರಿದ್ದರು.

ಸಂಘದ ಸದಸ್ಯರಾದ ರಾಜೇಶ್ ಶೇಟ್ , ದಯಾನಂದ್ , ಶಂಕರ್ ರಸಮಂಜರಿ ಕಾರ್ಯಕ್ರಮ ನೆಡೆಸಿಕೊಟ್ಟರು.