ಪೊಸ್ರಾಲು: ಜಲಾವೃತವಾದ ಮನೆ, ಗಾಢನಿದ್ದೆಯಲ್ಲಿರುವ ಸ್ಥಳೀಯ ಆಡಳಿತ

ಕಾರ್ಕಳ: ಇಲ್ಲಿನ ಮುಂಡ್ಕೂರು ಗ್ರಾಮದ ಪೊಸ್ರಾಲು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಸಂಪ ಶೆಟ್ಟಿಯವರ ಮನೆಯ ಅಂಗಳವು ನೀರಿನಿಂದ ಜಲಾವೃತವಾಗಿದೆ. ಅಕ್ಕಪಕ್ಕದ ಮನೆಯವರು ನೀರು ಹರಿದುಹೋಗುವ ತೋಡನ್ನು ಮುಚ್ಚಿರುವುದರಿಂದ ಈ ರೀತಿ ಸಮಸ್ಯೆ ಉಂಟಾಗಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗದೆ ಸಂಪ ಶೆಟ್ಟಿಯವರ ಮನೆಯ ಅಂಗಳವು ಜಲಾವೃತವಾಗಿದ್ದು, ಚಿಕ್ಕ ಮಕ್ಕಳು ನೀರಿನಲ್ಲಿ ಆಟವಾಡುವಂತಾಗಿದೆ. ಸಂಬಂಧಪಟ್ಟ ಸ್ಥಳೀಯ ಆಡಳಿತ ಈ ಬಗ್ಗೆ ಗಮನಹರಿಸದೆ ಗಾಢನಿದ್ದೆಯಲ್ಲಿದೆ.