ಸುಬ್ರಹ್ಮಣ್ಯ: ಕಾರಲ್ಲಿ ಗೋ ಸಾಗಾಟ:ಇಬ್ಬರ ಬಂಧನ

ಮಂಗಳೂರು: ಕಾರೊಂದರಲ್ಲಿ ಹಿಂಸಾತ್ಮಕವಾಗಿ ಗೋಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ಸುಬ್ರಹ್ಮಣ್ಯ ದ ನಡುಗಲ್ಲು ಶೆಟ್ಟಿಯಡ್ಕ‌ ಎಂಬಲ್ಲಿ ನಡೆದಿದೆ.
ಸ್ವಿಫ್ಟ್ ಕಾರಿನಲ್ಲಿ‌ ಮೂರು ಹಸುಗಳನ್ನು ಹಿಂಸಾತ್ಮಕವಾಗಿ‌ ಸಾಗಾಟ ಮಾಡಲಾಗುತ್ತಿತ್ತು. ಹಸುಗಳ ಕೈ ಕಾಲು ಕಟ್ಟಿ ಹಸುಗಳನ್ನು ಕಾರಿನಲ್ಲಿಡಲಾಗಿತ್ತು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಕ್ಕೆ ಸುಬ್ರಹ್ಮಣ್ಯ ಎಎಸ್ ಐ ನೇತೃತ್ವದ ಪೊಲೀಸ್ ತಂಡ, ಸುಬ್ರಹ್ಮಣ್ಯದ ನಡುಗಲ್ಲು ಶೆಟ್ಟಿಯಡಕ್ಕ ಎಂಬಲ್ಲಿ ಕಾರ್ಯಾಚರಣೆ ನಡೆಸಿದೆ.
ಮಾರುತಿ ಸಿಫ್ಟ್ ಕಾರನ್ನು ತಡೆದು ಅದರಲ್ಲಿದ್ದ ಮೂರು ಹಸುಗಳನ್ನು ರಕ್ಷಣೆ ಮಾಡಲಾಗಿದೆ. ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.