ICAI-SIRC ಅಧ್ಯಕ್ಷರಾಗಿ ಸಿಎ ಕಿರಣ ಕುಮಾರ್ ಹೆಚ್ ಆಯ್ಕೆ

ಉಡುಪಿ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ (SIRC) 2024-25ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣವು ಫೆ. 26 ರಂದು ಉಡುಪಿಯ
ಕುಂಜಿಬೆಟ್ಟುವಿನ ICAI ಭವನದಲ್ಲಿ ನಡೆಯಿತು.

ಸಿಎ ಕಿರಣ ಕುಮಾರ್ ಹೆಚ್ ಇವರು 2024-25 ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಸಿಎ. ಅರ್ಚನಾ ಆರ್ ಮೈಯಾ ಉಪಾಧ್ಯಕ್ಷರಾಗಿ, ಸಿಎ. ರಾಘವೇಂದ್ರ ಮೊಗೇರಾಯ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ಸಿಎ. ಅಶ್ವಥ್ ಜೆ ಶೆಟ್ಟಿ, ಸಿಕಾಸಾ ಅಧ್ಯಕ್ಷರಾಗಿ ಸಿಎ. ಕೆ ಲಕ್ಷ್ಮೀಶ ರಾವ್ ಆಯ್ಕೆಯಾಗಿದ್ದಾರೆ.

ICAI ಉಡುಪಿ ಶಾಖೆಯ ಹಿಂದಿನ ಅಧ್ಯಕ್ಷ ಸಿಎ. ಲೋಕೇಶ್ ಶೆಟ್ಟಿ ಉಪಸ್ಥಿತರಿದ್ದು ಹೊಸ ತಂಡಕ್ಕೆ ಶುಭ ಹಾರೈಸಿದರು. ಸಿಎ. ಮಹೀಂದ್ರಾ ಶೆಣೈ ಪಿ ಸ್ವಾಗತಿಸಿದರು, ಅಧ್ಯಕ್ಷ ಸಿಎ. ಕಿರಣ ಕುಮಾರ್ ಹೆಚ್ 2024-25 ನೇ ಸಾಲಿನ ತಮ್ಮ ಕ್ರಿಯಾ ಯೋಜನೆ ಕುರಿತು ಮಾತನಾಡಿದರು. ಸಿಎ. ಅರ್ಚನಾ ಆರ್ ಮೈಯಾ ನಿರೂಪಿಸಿದರು ಮತ್ತು ಸಿಎ. ರಾಘವೇಂದ್ರ ಮೊಗೇರಾಯ ವಂದಿಸಿದರು.