ಉಡುಪಿ: ಮಂಗಳವಾರ ಬರೋಡಾದಿಂದ ಮುಂಬೈನ ಬೋರಿವಿಲಿ ರೈಲ್ವೇ ಸ್ಟೇಶನ್ನಿಗೆ ಬಂದ ಪೇಜಾವರ ಶ್ರೀಪಾದರನ್ನು ಡೊಂಬಿವಿಲಿಗೆ ಟ್ಯಾಕ್ಸಿಯಲ್ಲಿ ಕರೆತರುವ ಮೂಲಕ ಚಾಲಕ ‘ಶರ್ಫ್ ಉದ್ದೀನ್ ಮಲೀಕ್’ ಸೌಹಾರ್ದತೆ ಮೆರೆದಿದ್ದಾರೆ.
ಅಲ್ಲದೇ ಅವರಿ ಆತ್ಮೀಯತೆಯಿಂದ ಗುರುಗಳ ಕೈ ಕುಲುಕಿ ಬೀಳ್ಕೊಟ್ಟಿದ್ದು, ಬಹಳ ವಿಶೇಷವಾಗಿತ್ತು. ‘ವಿವಿಧತೆಯಲ್ಲಿ ಏಕತೆ’ ಯೆಂಬ ಭಾರತದ ಸಾದ್ಗುಣ್ಯಕ್ಕೆ ಪೇಜಾವರರು ಅಪ್ಪಟ ರಾಯಭಾರಿ. ಈ ಕಾರಿನ ಡ್ಯಾಶ್ಬೋರ್ಡ್ ಮೇಲೊಮ್ಮೆ ಕಣ್ಣಾಡಿಸಿ. ಭಾರತದ ಬಾವುಟ ರಾರಾಜಿಸುತ್ತಿದೆ. ರಾಷ್ಟ್ರವನ್ನು ವಿರೋಧಿಸುವ ಅನೇಕರ ಮಧ್ಯೆ ಇದು ವಿಶೇಷವೇ.












