ಪರ್ಯಾಯ ಅಕ್ಕಿ ಮುಹೂರ್ತ ಪೂರ್ವ ಭಾವಿ ಚಿಂತನಾ ಸಭೆ

ಮುಂಬರುವ ಉಡುಪಿಯ ಶ್ರೀಕೃಷ್ಣಪೂಜಾ ಪರ್ಯಾಯವನ್ನು ನೆರವೇರಿಸಲಿರುವ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥರ ಆದೇಶದಂತೆ ಮೇ 17 ರಂದು ಪುತ್ತಿಗೆ ಮಠದಲ್ಲಿ ಪೂರ್ವಭಾವಿ ಚಿಂತನಾ ಸಭೆಯು ಸ್ಥಳೀಯ ವಿವಿಧ ಸಂಘದ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹವ್ಯಕ ಸಭಾ, ಬಿಲ್ಲವ ಸಮಾಜ, ಮೊಗವೀರ ಸಮಾಜ, ವಿಶ್ವಕರ್ಮ ಸಮಾಜ, ಕುಲಾಲ ಸಂಘ ಜೋಗಿ ಸಮಾಜ, ತುಳು ಕೂಟ ,ಜಿ.ಎಸ್.ಬಿ ಸಮಾಜಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.