ಕಾರ್ಕಳ ಕಾಂಗ್ರೆಸ್ ಗೆ ಸೇರ್ಪಡೆಯಾದ ಬೆಳ್ಮಣ್ ಬಿಜೆಪಿ ಕಾರ್ಯಕರ್ತರು

ಕಾರ್ಕಳ: ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಎ.25 ರಂದು ‘ಯುವ ಉದಯ’ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಜಯ್ ನೇತೃತ್ವದಲ್ಲಿ 8 ಜನ ಬೆಳ್ಮಣ್ ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಲ್, ಬ್ಲಾಕ್ ಆದ್ಯಕ್ಷರಾದ ಸದಾಶಿವ ದೇವಾಡಿಗ, ಕೆಪಿಸಿಸಿ ಸದಸ್ಯರಾದ ಸುರೇಂದ್ರ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ನ ದೀಪಕ್ ಕೋಟ್ಯಾನ್, ಅರ್ಚನಾ ದೇವಾಡಿಗ, ಸಿ.ಟಿ ರಂಜಿತ್, ಕಾರ್ಕಳ ಯುವ ಕಾಂಗ್ರೆಸ್ ನ ಯೋಗೀಶ್, ಸುಹಾಸ್ ಕಾವ, ಪ್ರದೀಪ್ ಬೇಲಾಡಿ ಹಾಗೂ ಪುರಸಭೆ ಸದಸ್ಯರು ಕಾಂಗ್ರೆಸ್ ಸೇರ್ಪಡೆಗೊಂಡ ಕಾರ್ಯಕರ್ತರಿಗೆ ಕಾಂಗ್ರೆಸ್ ಧ್ವಜ ನೀಡಿ ಬರಮಾಡಿಕೊಂಡರು.