ಆರೋಗ್ಯ ಭಾರತಿ ರಾಷ್ಟ್ರೀಯ ಅಧ್ಯಕ್ಷರಿಂದ ಎಸ್.ಡಿ.ಎಂ ಆಯುರ್ವೇದ ಕಾಲೇಜಿಗೆ ಭೇಟಿ

ಉಡುಪಿ:  ಆರೋಗ್ಯ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾ. ರಾಕೇಶ ಪಂಡಿತ್ ಇವರು ಬುಧವಾರ ಉಡುಪಿ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿಗೆ ಭೇಟಿ ನೀಡಿದರು. ಆರೋಗ್ಯ ಭಾರತಿಯ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಸದಾಶಿವಜೀ ಮತ್ತು ಮಂಗಳೂರು ವಿಭಾಗ ಸಂಯೋಜಕ್ ಪುರುಷೋತ್ತಮ ಗೌಡ ದೇವಸ್ಯ, ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಭಟ್, ಸಹ ಕಾರ್ಯದರ್ಶಿ ಕೃಷ್ಣರಾಜ ಸಾಮಗ ಮತ್ತು ಡಾ. ಸದಾನಂದ ಭಟ್ ಉಪಸ್ಥಿತರಿದ್ದರು. ಅತಿಥಿಗಳನ್ನು ಮೆಡಿಕಲ್ ಸುಪರಿಡೆಂಟ್ ನಾಗರಾಜ್ ಎಸ್ ಮತ್ತು ಕಾಲೇಜಿನ ಪ್ರಾಂಶುಪಾಲೆ ಡಾ‌.ಮಮತಾ ಕೆ.ವಿ, ಪಿ ಆರ್ ಓ ಜಯಪ್ರಕಾಶ್ , ರತ್ನಶ್ರೀ ಆರೋಗ್ಯಧಾಮದ ಡಾ. ದೀಪಕ್ ಬರಮಾಡಿಕೊಂಡರು.

ಅವರು ಕಾಲೇಜಿನ‌ ಸಂಶೋಧನಾ ಕೆಂದ್ರ ಮತ್ತು ರತ್ನಶ್ರೀ ಆರೋಗ್ಯಧಾಮವನ್ನು ಸಂದರ್ಶಿಸಿದರು. ನಂತರ ಡಾ .ರಾಕೇಶ್ ಪಂಡಿತ್ ಅವರು ಕಾಲೇಜಿನ ಪ್ರಾಂಶುಪಾಲೆ ಮತ್ತು ಬೋಧಕ ಸಿಬ್ಬಂದಿಗಳೊಡನೆ ಸಂವಾದ ನಡೆಸಿದರು.