ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ರೋಟರಿ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ

ಉಡುಪಿ: ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ಪ್ರಾಯೋಜಕತ್ವದಲ್ಲಿ ರೋಟರಿ ವಲಯ-4 ಮತ್ತು ಪಟ್ಲ ಯು ಎಸ್ ನಾಯಕ್ ಶಾಲಾ ಮಕ್ಕಳೊಂದಿಗೆ
ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಪಿ. ರಬೀಂದ್ರ ನಾಯಕ್ ಶತವರ್ಷ ಸಂಸ್ಕರಣೆಯ ಅಂಗವಾಗಿ
ಶಾಲೆಯ ಮಕ್ಕಳ ಪ್ರಯಾಣಕ್ಕೆ ರೋ. ಪಿ. ಗಣೇಶ್ ನಾಯಕ್‌ ಅವರು ಶಾಲೆಗೆ 23.00 ಲಕ್ಷ ರೂ ನ ಬಸ್ಸ್ ಅನ್ನು
ಕೊಡುಗೆಯಾಗಿ ಹಸ್ತಾಂತರ ಮಾಡಲಿದ್ದಾರೆ. ನವೆಂಬರ್ 1 ರಂದು ಬೆಳಿಗ್ಗೆ 9:30 ರಿಂದ 11.30ರವರೆಗೆ ಯು.ಯಸ್.ನಾಯಕ್ ಪ್ರೌಢಶಾಲೆ ಪಟ್ಲ ವಠಾರದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಟೌನ್‌ ರೋಟರಿ ಅಧ್ಯಕ್ಷ ರೋ. ನಿತ್ಯಾನಂದ ನಾಯಕ್‌ ನರಸಿಂಗೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋ. ರಾಜಾರಾಮ ಭಟ್ , 3182 ಜಿಲ್ಲಾ ಗವರ್ನರ್ 2021-22,
ರೋ.ರಾಮಚಂದ್ರ ಉಪಾಧ್ಯ – ಎ.ಜಿ. 3182 ರೋಟರಿ ಜಿಲ್ಲೆ, ರೋ. ಗಣೇಶ ನಾಯಕ್‌ ಬೆಲ್ವತ್ರೆ ಮಾಜಿ ಅಧ್ಯಕ್ಷರು ಟೌನ್ ರೊಟರಿ, ಡಾ. ಮುದ್ದಣ್ಣ ಬಾಂದೇಲ್ಕಾರ್ ಪೆರಣಂಕಿಲ ಖ್ಯಾತ ವೈದ್ಯರು, ಮುಖ್ಯೋಪಾಧ್ಯಾಯ ಶ್ರೀಕಾಂತ ಪ್ರಭು ಪಟ್ಲ ಆಗಮಿಸಲಿದ್ದಾರೆ.

ಸಂಸ್ಥೆಯ ಪರಿಚಯ ವನ್ನು ರೋ. ಡಾ. ನಾರಾಯಣ ಶೆಣೈ, ಅಧ್ಯಕ್ಷರು, ರೂರಲ್ ಎಜ್ಯುಕೇಷನ್‌ ಸೊಸೈಟಿ ಪಟ್ಲ, ಪೂಜ್ಯ ಪಿ. ರಬೀಂದ್ರ ನಾಯಕ್ ಸಂಸ್ಕರಣೆಯನ್ನು ರೋ. ಪ್ರೊ. ಪಿ. ದಯಾನಂದ ಶೆಟ್ಟಿ, ನಿವೃತ್ತ ಪ್ರಾಂಶುಪಾಲರು, ಉಡುಪಿ ಹಾಗೂ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ರೋ. ನಿತ್ಯಾನಂದ ಪಡ್ರೆ
ಉದಯವಾಣಿಯ ನಿವೃತ್ತ ಹಿರಿಯ ಉಪಸಂಪಾದಕರು ಇವರು ಮಾಡಲಿದ್ದಾರೆ.

ಶಾಲಾ ಆಡಳಿತ ಮಂಡಳಿ, ಶಿಕ್ಷಕ ಬಳಗ, ವಿದ್ಯಾರ್ಥಿವೃಂದ, ಅಧ್ಯಕ್ಷರು ಮತ್ತು ರೋಟರಿ ವಲಯ-4ರ ಎಲ್ಲಾ ಕ್ಲಬ್‌ಗಳ ಸದಸ್ಯರು ಸರ್ವರನ್ನೂ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿದ್ದಾರೆ.