ಉಡುಪಿ: ಹೆಗ್ಗುಂಜೆ ಗ್ರಾಮದ ಮಾಜಿ ಪಂಚಾಯತ್ ಸದಸ್ಯರಾದ ಕೃಷ್ಣ ಮರಕಾಲ ಯಾನಿ ರಿಕ್ಷಾ ಕಿಟ್ಟ ಅಣ್ಣ ಇವರು ಶ್ವಾಸಕೋಶ ಕ್ಯಾನ್ಸರಿನಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗೆ ಈಗಾಗಲೇ ಲಕ್ಷಾಂತರ ರುಪಾಯಿಗಳನ್ನು ವ್ಯಯಿಸಲಾಗಿದೆ. ಇವರ ಕುಟುಂಬ ಆರ್ಥಿಕವಾಗಿ ವಿಪರೀತ ಸಂಕಷ್ಟದಲ್ಲಿದ್ದು, ದುಡಿಯುತ್ತಿದ್ದ ವ್ಯಕ್ತಿ ಹಾಸಿಗೆ ಹಿಡಿದಿದ್ದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ.
ಇವರ ಚಿಕಿತ್ಸೆ ಮತ್ತು ಕುಟುಂಬದವರ ಮುಂದಿನ ಜೀವನಕ್ಕೆ ಸಹಾಯವಾಗುವಂತೆ ದಾನಿಗಳು ಮುಂದೆ ಬಂದು ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಬೇಕಾಗಿ ವಿನಂತಿ.
ದಾನಿಗಳು ನೀಡುವ ಸಣ್ಣ ಸಹಾಯವೂ ಒಂದು ಜೀವ ಮತ್ತು ಒಂದಿಡೀ ಕುಟುಂಬದ ಪೋಷಣೆಗೆ ಸಹಾಯಕವಾಗುವುದು.
ಆರ್ಥಿಕ ಸಹಾಯ ನೀಡಲಿಚ್ಛಿಸುವ ಕೊಡುಗೈ ದಾನಿಗಳು ಕೃಷ್ಣ ಮರಕಾಲ ಅವರ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಸಂಖ್ಯೆ: 9449894497 ಗೆ ಹಣ ವರ್ಗಾವಣೆ ಮಾಡಬಹುದು.

















