ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಘೋಷಿಸುವಂತೆ ಆಗ್ರಹ: ಎ.1ರಂದು ಬೃಹತ್ ಪಾದಯಾತ್ರೆ

ಉಡುಪಿ: ಉಡುಪಿ ಜಿಲ್ಲೆಗೆ ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಸರಕಾರವನ್ನು ಆಗ್ರಹಿಸಿ ಏಪ್ರಿಲ್ 1 ರಂದು ಮನೋವೈದ್ಯ ಡಾ. ಪಿವಿ ಭಂಡಾರಿರವರ ಮುಂದಾಳತ್ವದಲ್ಲಿ ಕರಾವಳಿ ಯೂತ್ ಕ್ಲಬ್ ಉಡುಪಿ ತಂಡವು ಬೆಳಿಗ್ಗೆ 8 ಗಂಟೆಗೆ ಮಲ್ಪೆ ಗಾಂಧಿ ಪ್ರತಿಮೆಯಿಂದ ಮಣಿಪಾಲ ಡಿಸಿ ಆಫೀಸ್ ನವರೆಗೆ ಮೌನ ಪಾದಯಾತ್ರೆ ಹಮ್ಮಿಕೊಳ್ಳಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಡಿಸಿ ಹಾಗೂ ಜನಪ್ರತಿಧಿಗಳಿಗೆ ಮನವಿಯನ್ನು ಸಲ್ಲಿಸುವರು, ಹಾಗೆಯೇ ಜಿಲ್ಲೆಗೆ ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರಕಾರಕ್ಕೆ ಆಗ್ರಹಿಸುವ ನಿಟ್ಟಿನಲ್ಲಿ ಮುಂದಿನ ಹೋರಾಟದ ರೂಪುರೇಷ ಮತ್ತು ಜಿಲ್ಲೆಯಾದ್ಯಂತ ಹೋರಾಟದ ನಿರ್ಣಯವನ್ನು ಕೈಗೊಳ್ಳಲಿದ್ದಾರೆ.

ಈ ಪಾದಯಾತ್ರೆಯು ಉಡುಪಿಯ ಸಮಸ್ತ ನಾಗರಿಕರ ಪರವಾಗಿ ನಡೆಯಲಿದ್ದು, ಯಾವುದೇ ರಾಜಕೀಯ ಪ್ರೇರಿತವಾಗಿರದೆ ಪಕ್ಷಾತೀತವಾಗಿರಲಿದೆ ಎಂದು ಪ್ರಕಟನೆ ತಿಳಿಸಿದೆ.