ಅಕ್ಕಸಾಲಿಗ ವೃತ್ತಿ ಮಾಡುತ್ತಿರುವವರಿಗೆ ಇ- ಶ್ರಮ್ ಕಾರ್ಡ್ ಹಾಗೂ ಪಿಂಚಣಿ ನೋಂದಣಿ ಕಾರ್ಯಕ್ರಮ

ಉಡುಪಿ: ಅಸಂಘಟಿತ ಕಾರ್ಮಿಕ ವಲಯದಲ್ಲಿರುವ ಅಕ್ಕಸಾಲಿಗ ವೃತ್ತಿ ಮಾಡುತ್ತಿರುವ ಸದಸ್ಯರಿಗೆ  ಇ- ಶ್ರಮ್ ಕಾರ್ಡ್ ಹಾಗೂ ಪಿಂಚಣಿ ನೋಂದಣಿ ಮತ್ತು ಕಾರ್ಡ್ ವಿತರಣೆ ಕಾರ್ಯಕ್ರಮವು ನಗರದ ವಳಕಾಡು ದೈವಜ್ಞ ಸಭಾಭವನದಲ್ಲಿ ನಡೆಯಿತು.

ಕಾರ್ಮಿಕ ಅಧಿಕಾರಿ ಕುಮಾರ್, ಇ- ಶ್ರಮ್ ಯೋಜನೆ, ಪಿ.ಎಂ.ಎಸ್.ವೈ.ಎಮ್ ಮತ್ತು ಎನ್.ಪಿ.ಎಸ್ ಟ್ರೇರ‍್ಸ್ ಯೋಜನೆಯ ಕುರಿತು ಮಾಹಿತಿ ನೀಡಿ, ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯ ಅಸಂಘಟಿತ ಕಾರ್ಮಿಕರು ನೊಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ನೊಂದಾಯಿತ ಅಸಂಘಟಿತ ಕಾರ್ಮಿಕರಿಗೆ ಕಾರ್ಡುಗಳನ್ನು ವಿತರಿಸಲಾಯಿತು.