ಮಣಿಪಾಲ: ಮುನಿಯಾಲು ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಪ್ರವೇಶಾತಿ ಆರಂಭ

ಉಡುಪಿ: ಜಿಲ್ಲೆಯ ಏಕ ಮಾತ್ರ ಯೋಗ ನ್ಯಾಚುರೋಪತಿ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಆಗಿರುವ ಮಣಿಪಾಲದಲ್ಲಿರುವ ಮುನಿಯಾಲು ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ 2021-22 ರ ಸಾಲಿನ ಪ್ರವೇಶಾತಿ ನಡೆಯುತ್ತಿದ್ದು, ಪಿ.ಯು.ಸಿ. ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರುವ ಅರ್ಹ ವಿದ್ಯಾರ್ಥಿಗಳು ಶೀಘ್ರವಾಗಿ ತಮ್ಮ ಪ್ರವೇಶಾತಿಯನ್ನು ಪಡೆದುಕೊಳ್ಳಬಹುದು.

ನೀಟ್ ಪರೀಕ್ಷೆಯಲ್ಲಿ ಅರ್ಹತೆಯಿಲ್ಲದೆ ತಮಗೆ ಆಸಕ್ತಿಯಿಲ್ಲದ ಪದವಿ ಕೋರ್ಸುಗಳಿಗೆ ಈಗಾಗಲೇ ಸೇರಿಕೊಂಡಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು.

ಯೋಗ, ನ್ಯಾಚುರೋಪತಿ ವೈದ್ಯರಿಗೆ ಜಗತ್ತಿನಾದ್ಯಂತ ಬೇಡಿಕೆ ಇರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಭವ್ಯ ಭವಿಷತ್ತಿಗಾಗಿ ಆಯುಷ್ ಪದ್ಧತಿಯ ವೈದ್ಯರಾಗುವ ಈ ಸುಸಂದರ್ಭವನ್ನು ಉಪಯೋಗಿಸಿಕೊಂಡು ಇದರ ಸದುಪಯೋಗವನ್ನು ಪಡೆಯಬಹುದು.

ಈ ಶೈಕ್ಷಣಿಕ ವರ್ಷದ ವಿಶೇಷ ಕೊಡುಗೆಯಾಗಿ ಕರ್ನಾಟಕ ಸರಕಾರದಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಪಾವತಿಸುವಷ್ಟೇ ಶುಲ್ಕವನ್ನು ಪಾವತಿಸಿ ಆಡಳಿತ ಮಂಡಳಿಯ ಸೀಟ್‌ನ್ನು ಪಡೆಯಬಹುದು ಎಂದು ಸಂಸ್ಥೆಯು ಪ್ರಕಟನೆ ತಿಳಿಸಿದೆ.