ಆಗುಂಬೆ ಘಾಟಿಯಲ್ಲಿ‌ ರಸ್ತೆ ದುರಸ್ತಿ ಕಾಮಗಾರಿ: ವಾಹನ ಸಂಚಾರ ನಿರ್ಬಂಧ

ಉಡುಪಿ, ಮಾ.11: ರಾಷ್ಟ್ರೀಯ ಹೆದ್ದಾರಿ 169 ಎ ರ ಕಿ. ಮೀ. 33.00 ರಿಂದ 51.60 ವರೆಗೆ ನಿಯತಕಾಲಿಕ ದುರಸ್ಥಿ ಹಿನ್ನಲೆಯಲ್ಲಿ ರಸ್ತೆ ದುರಸ್ಥಿ ಕಾಮಗಾರಿಯನ್ನು ಆಗುಂಬೆ ಘಾಟಿಯಲ್ಲಿ ನಿರ್ವಹಿಸಬೇಕಾಗಿರುವುದರಿಂದ ಕಿರಿದಾದ ರಸ್ತೆ ಇದ್ದು ಡಾಂಬರೀಕರಣ ಸಮಯದಲ್ಲಿ ವಾಹನ ಸಂಚಾರ ಮಾಡಲು ಜಾಗವಿಲ್ಲದ ಹಿನ್ನಲೆ, ಮಾರ್ಚ್ 5 ರಿಂದ 15 ರವರೆಗೆ ಆಗುಂಬೆ ಘಾಟಿಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಿ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ನಡೆಸುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.

ಬದಲಿ ಮಾರ್ಗದ ವಿವರ:   

ಲಘು ವಾಹನಗಳು, ಉಡುಪಿ- ಕಾರ್ಕಳ- ಮಾಳಾಘಾಟ್- ಶೃಂಗೇರಿ- ಕೊಪ್ಪ-ತೀರ್ಥಹಳ್ಳಿ (ರಾ.ಹೆ 169) ಮಾರ್ಗವಾಗಿ ಹಾಗೂ ಭಾರೀ ವಾಹನಗಳು, ಉಡುಪಿ- ಕುಂದಾಪುರ-ಸಿದ್ಧಾಪುರು- ಹೊಸಂಗಡಿ- ಮಾಸ್ತಿಕಟ್ಟೆ- ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.