ಕೆಳಾರ್ಕಳಬೆಟ್ಟು: 25 ಭೂ ಮಾಲೀಕರಿಗೆ ಶಾಸಕರಿಂದ ಉಡುಪಿ ಕೇದಾರ ಕಜೆ ಅಕ್ಕಿ ವಿತರಣೆ

ಉಡುಪಿ: ಹಡಿಲು ಭೂಮಿ ಕೃಷಿಗೆ ಸಹಕರಿಸಿದ ಕೆಳಾರ್ಕಳಬೆಟ್ಟು ವ್ಯಾಪ್ತಿಯ 25 ಭೂ ಮಾಲೀಕರಿಗೆ ಗುರುವಾರ ಉಡುಪಿ ಕೇದಾರ ಕಜೆ ಅಕ್ಕಿ ವಿತರಣೆ ಮಾಡಲಾಯಿತು.

ಕೇದಾರೋತ್ಥಾನ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಶಾಸಕ ಕೆ. ರಘುಪತಿ ಭಟ್ ಅವರು ಭೂ ಮಾಲೀಕರಿಗೆ ಅಕ್ಕಿ ವಿತರಿಸಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ ಮತ್ತು ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರು, ಮಾಜಿ ಸದಸ್ಯರು ಹಾಗೂ ಸ್ಥಳೀಯ ಉಪಸ್ಥಿತರಿದ್ದರು.

ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಹಡಿಲು ಬಿದ್ದ ಗದ್ದೆಗಳಲ್ಲಿ ಸಾವಯವ ಕೃಷಿ ಮಾಡಲಾಗಿತ್ತು.

ಈ ಆಂದೋಲನಕ್ಕೆ ಸಹಕರಿಸಿದ ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳಾರ್ಕಳಬೆಟ್ಟಿನ ಸುಮಾರು 25 ಭೂ ಮಾಲೀಕರಿಗೆ “ಉಡುಪಿ ಕೇದಾರ ಕಜೆ” ಯನ್ನು ಇಂದು ವಿತರಣೆ ಮಾಡಲಾಯಿತು.