ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಮಂಗಳವಾರ ರಾತ್ರಿ ದೇವರ ಸನ್ನಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಪಲ್ಲಕಿ ಉತ್ಸವ, ಉತ್ಸವ ಬಲಿ, ರಥೋತ್ಸವದಲ್ಲಿ ಚಂಡೆ ವಾದನ, ಮಂಗಳವಾದ್ಯ, ಬಿರುದು ವಾಲಿಗಳಿಂದ ಸಂಭ್ರಮದಿಂದ ರಥೋತ್ಸವ ಜರಗಿತು.
ಸುಡುಮದ್ದು ಪ್ರದರ್ಶನ, ಓಲಗ ಮಂಟಪ ಪೂಜೆ ಇತ್ಯಾದಿ ಧಾರ್ಮಿಕ ಪೂಜಾ ವಿಧಾನಗಳನ್ನು ಶ್ರೀನಿವಾಸ ತಂತ್ರಿಗಳ ಮಾರ್ಗ ದರ್ಶನದಲ್ಲಿ, ಚಂದ್ರಶೇಖರ ಐತಾಳ, ಯೋಗೀಶ್ ಉಪಾಧ್ಯ ಪೂಜಾ ವಿಧಿಗಳನ್ನು ನೆರವೇರಿಸಿದರು.
ಪ್ರಧಾನ ಅರ್ಚಕರಾದ ವಾಸುದೇವ ಉಪಾಧ್ಯ, ಅರ್ಚಕ ಮಧುಸೂದನ ಉಪಾಧ್ಯ, ದೇವಳದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಹರೀಶರಾಮ್ ಬನ್ನಂಜೆ, ನಗರ ಸಭಾ ಸದಸ್ಯರಾದ ಟಿ ಜಿ ಹೆಗ್ದೆ, ಸವಿತಾ ಹರೀಶ್ ರಾಮ್, ದೇವಳದ ಸಮಿತಿಯ ಸದ್ಯಸರಾದ ದಯಾನಂದ ಕಲ್ಮಾಡಿ, ಸುರೇಶ ಸೇರಿಗಾರ, ಭುಜಂಗ ಶೆಟ್ಟಿ, ವಿಠ್ಠಲ ಶೆಟ್ಟಿ, ಸುಧಾಕರ ಮಲ್ಯ, ಅಶ್ವಿನಿ ಶೆಟ್ಟಿ, ಅನುಪಮ ಸುವರ್ಣ, ರವಿರಾಜ್ ಭಟ್ ಹಾಗೂ ನೂರಾರು ಭಕ್ತರೂ ಉಪಸ್ಥರಿದ್ದರು.












