ಗುರುನಾರಾಯಣ ಸ್ವಾಮಿ ಯುವಕ ಸಂಘದ ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ಯಂತ್ರ ಕೊಡುಗೆ

ಕಾರ್ಕಳ: ಇರ್ವತ್ತೂರು ಗ್ರಾಮದ ಕೊಳಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುನಾರಾಯಣ ಸ್ವಾಮಿ ಯುವಕ ಸಂಘ ಆರಂತಬೆಟ್ಟು ವತಿಯಿಂದ ಫೆ. 12ರಂದು ಶುದ್ಧ ಕುಡಿಯುವ ನೀರಿನ ಯಂತ್ರ ನೀಡಲಾಯಿತು.

ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯಕ್ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧ್ವರಾಜ್ ಅವರಿಗೆ ಯಂತ್ರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್.‌ ಕೋಟ್ಯಾನ್‌, ಜಯಕೀರ್ತಿ ಕಡಂಬ, ರತ್ನರಾಜ ಹೆಗಡೆ, ಶಂಕರ ಪೂಜಾರಿ, ಗೋಪಾಲ ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನಿತಾ ಕುಲಾಲ್, ಸದಸ್ಯರಾದ ಶೇಖರ್ ಅಂಚನ್, ವಸಂತ ಪೈ, ರವಿರಾಜ್, ಗುರುನಾರಾಯಣ ಸ್ವಾಮಿ ಯುವಕ ಸಂಘದ ಗೌರವಾಧ್ಯಕ್ಷ ಸದಾನಂದ ಕೋಟ್ಯಾನ್, ಅಧ್ಯಕ್ಷ ಗೋವಿಂದ ಪೂಜಾರಿ, ಕಾರ್ಯದರ್ಶಿ ಚೇತನ್, ಸದಸ್ಯರಾದ ಜಯಂತ, ಸಂದೀಪ್, ಸುಭಾಷ್, ವಿಶ್ವನಾಥ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.