ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಐವತ್ತೆರಡು ಅಡಿ ಎತ್ತರದ ಶಿವಲಿಂಗ ಪ್ರದರ್ಶನ ಹಾಗೂ ಉದ್ಘಾಟನೆ

ಬಸ್ರೂರು ಫೆ.13: ಕುಂದಾಪುರ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಐವತ್ತೆರಡು ಅಡಿ ಎತ್ತರದ ಶಿವಲಿಂಗ ಪ್ರದರ್ಶನ ಹಾಗೂ ಈಶ್ವರೀಯ ಸಂದೇಶ ಕಾರ್ಯಕ್ರಮವನ್ನು ಧರ್ಮದರ್ಶಿ ಶ್ರೀ ಅಪ್ಪಣ್ಣ ಹೆಗ್ಡೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಬಿ.ಕೆ. ವಾದಿರಾಜ ಭಟ್ ಸ್ವಾಗತಿಸಿದರೆ, ಸಂಚಾಲಕಿ ಬಿ.ಕೆ. ಗೀತಕ್ಕನವರು ಈಶ್ವರೀಯ ಕಾಣಿಕೆ ನೀಡಿ ವಂದಿಸಿದರು. ಬಿ.ಕೆ .ಜಯಶ್ರೀ ಅಕ್ಕನವರು ಈಶ್ವರೀಯ ಸಂದೇಶ ನೀಡಿದರು.

ಇವತ್ತು & ನಾಳೆ ಸೋಮವಾರ ಈ ಅದ್ಭುತ ಶಿವಲಿಂಗದ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.