ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮೊಳಗಿದ ಜೈ ಶ್ರೀರಾಮ್, ಭಾರತ್ ಮಾತಕೀ‌ ಜೈ ಘೋಷಣೆ.!

ಉಡುಪಿ: ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಉಡುಪಿ ಎಂಜಿಎಂ ಕಾಲೇಜಿನ‌ ಆವರಣ ಇಂದು ಅಕ್ಷರಶಃ ರಾಣಾಂಗಣವಾಯಿತು. ಹಿಜಾಬ್ ಗೆ ಪ್ರತಿರೋಧವಾಗಿ ನೂರಾರು ವಿದ್ಯಾರ್ಥಿಗಳು ‌ಕೇಸರಿ ಪೇಟ, ಶಾಲು ತೊಟ್ಟು ಬಂದಿದ್ದರು. ಆದರೆ ಕಾಲೇಜು ಆಡಳಿತ ಮಂಡಳಿ ಗೇಟ್ ಬಂದ್ ಮಾಡಿ ಕಾಲೇಜಿನ ಆವರಣಕ್ಕೆ ಪ್ರವೇಶಿಸಿದಂತೆ ತಡೆಯೊಡ್ಡಿದರು.

ಹೀಗಾಗಿ ಕಾಲೇಜು ಹೊರಗಡೆ ಜಮಾಯಿಸಿದ್ದ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಬೀಸುತ್ತಾ, ಜೈ ಶ್ರೀರಾಮ್, ಭಾರತ್ ಮಾತಕೀ ಜೈ ಎಂದು ಘೋಷಣೆ ಮೊಳಗಿಸುತ್ತಾ ಪ್ರತಿಭಟನೆ ನಡೆಸಿದರು. ಹಿಜಾಬ್ ಹಾಕಿಕೊಂಡು ಬರುವ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶಿಸಲು ಅವಕಾಶ ನೀಡಿದರೆ ನಾವು ಕೇಸರಿ ಪೇಟ, ಶಾಲು ಧರಿಸಿಕೊಂಡು ಬರುತ್ತೇವೆ.

ಸಮವಸ್ತ್ರ ಎಂದರೆ ಎಲ್ಲರಿಗೂ ಸಮಾನತೆ ಇರಬೇಕು. ಒಬ್ಬೊಬ್ಬರಿಗೆ ಒಂದೊಂದು ನಿಯಮ ಸರಿಯಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು‌ ಆಕ್ರೋಶ ವ್ಯಕ್ತಪಡಿಸಿದರು.