ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ನಾಣ್ಯ ತುಲಾಭಾರ

ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರು ಆಗಿರುವ ಉಡುಪಿ ಪೇಜಾವರ ಮಠ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಮಂಡ್ಯ ಮದ್ದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಭಕ್ತರು ಅಭಿಮಾನಿಗಳು ನಾಣ್ಯ ತುಲಾಭಾರ ನೆರವೇರಿಸಿ ಅಭಿವಂದಿಸಿದರು.

ಇದಕ್ಕೂ ಮೊದಲು ಶ್ರೀಗಳು ಮಠದ ಪಟ್ಟದ ದೇವರ ಪೂಜೆ ಹಾಗೂ ಹೊಳೆ ಆಂಜನೇಯನಿಗೆ ಪಂಚಾಮೃತ ಅಭಿಷೇಕ ಸಹಿತ ಪೂಜೆ ಮಾಡಿದರು.