ತುಳು ಕೊಡವ ಭಾಷೆಗಳ ಅಳಿವು ಉಳಿವು: ಪುಸ್ತಕ ಬಿಡುಗಡೆ 

ಉಡುಪಿ:ಪುಸ್ತಕ ಬಿಡುಗಡೆ ಸಮಾರಂಭ ಜನವರಿ ೨೪ ರಂದು ಜಗನ್ನಾಥ ಸಭಾಭವನ ಬಡಗುಬೆಟ್ಟು, ಸಭಾಭವನ ಕಟ್ಟಡ ಉಡುಪಿಯಲ್ಲಿ ಬೆಳ್ಳಗೆ ೧೧ ಗಂಟೆಗೆ ನಡೆಯಲಿದೆ.  ವಿಧಾನ ಪರಿಷತ್ ಸದಸ್ಯ, ಮಾಜಿ ಸಂಸದರು ಬಿ.ಕೆ.ಹರಿಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದು, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮಿನ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದು ಮಾಜಿ ಎಐಸಿಸಿ ಸದಸ್ಯ ಅಮೃತ್ ಶಣೈ ಹೇಳಿದರು.
ತುಳು ಭಾಷೆಯನ್ನು ೮ ನೆ ಪರಿಚ್ಛೇದ ಕ್ಕೆ ಸೇರಿಸಬೇಕು ಹಾಗೂ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂಬ ಹೊರಾಟವನ್ನು  ಅನೇಕರು ಬೇರೆ ಬೇರೆ ರೀತಿಯಲ್ಲಿ ಮಾಡುತ್ತಲೇ ಇದ್ದಾರೆ, ಬಿ.ಕೆ.ಹರಿಪ್ರಸಾದ್ ಅವರು ಸಂಸತ್ ಭಾಷಣಗಳನ್ನು ತುಳು ಕೊಡವ ಭಾಷೆಗಳ ಅಳಿವು ಉಳಿವು ಎಂಬ ಪುಸ್ತಕ ರೂಪದಲ್ಲಿ ಮುಂದೆ ಹೋರಾಟಗಾರರಿಗೆ  ಸಹಾಯವಾಗಲು ಮತ್ತು ತುಳು ಭಾಷಾ ಅಭಿವೃದ್ಧಿಗಾಗಿ ಶ್ರಮಿಸಲು ಸಹಾಯಕವಾಗಲಿ ಎಂದು ಪುಸ್ತಕ ಬರೆದ್ದಿದ್ದಾರೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಾಹಿತಿ ಗಂಗಾಧರ್ ಕಿದಿಯೂರು ವಂದಿಸಿದರು.
ಸುದ್ದಿಗೋಷ್ಠಿಯಲ್ಲಿ  ಸಾಮಾಜಿಕ ಕಾರ್ಯಕರ್ತ  ನಾರಾಯಣ ಶೇರಿಗಾರ್,  ಸಮಾಜ ಸೇವಕ ಯಜ್ಞೇಶ್ ಆಚಾರ್  ಉಪಸ್ಥಿತರಿದ್ದರು.