ಟ್ಯಾಂಕರ್​ ಡಿಕ್ಕಿಯಾಗಿ ಹೊತ್ತಿಉರಿದ ಬಸ್; 12 ಮಂದಿ ಸಜೀವ ದಹನ

ರಾಜಸ್ಥಾನ: ಬಸ್​ಗೆ ಟ್ಯಾಂಕರ್​ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿ 12 ಜನ ಸಜೀವ ದಹನಗೊಂಡಿರುವ ಭೀಕರ ಘಟನೆ ರಾಜಸ್ಥಾನದ ಬರ್ಮಾರ-ಜೋಧಪುರ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬಲರೋಟಾದಿಂದ ಹೊರಟಿದ್ದ ಬಸ್​ಗೆ, ಎದುರಾಗಿ ಬಂದ ಟ್ಯಾಂಕರ್​ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸುಮಾರು 25 ಜನ ಬಸ್​ನಲ್ಲಿ ಪ್ರಯಾಣಿಸುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ 10 ಮೃತದೇಹಗಳನ್ನ ಹೊರತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಪಚೊದ್ರಾ ಜಿಲ್ಲಾಧಿಕಾರಿ, ಮತ್ತು ಶಾಸಕ ಮದನ್  ಪ್ರಜಾಪತ್​ ಆಗಮಿಸಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.